ಹಿತ್ತಲ ಬಾಗಿಲಿನಿಂದ ಯಾರ‍್ಯಾರೋ ಬಂದು ಸಿಎಂ ಆಗಿದ್ದಾರೆ: ಕುಮಾರಸ್ವಾಮಿಗೆ ಎಂಎಲ್‌ಸಿ ಪುಟ್ಟಣ್ಣ ಟಾಂಗ್
x

ಹಿತ್ತಲ ಬಾಗಿಲಿನಿಂದ ಯಾರ‍್ಯಾರೋ ಬಂದು ಸಿಎಂ ಆಗಿದ್ದಾರೆ: ಕುಮಾರಸ್ವಾಮಿಗೆ ಎಂಎಲ್‌ಸಿ ಪುಟ್ಟಣ್ಣ ಟಾಂಗ್


ಡಿಕೆ ಶಿವಕುಮಾರ್ ಅವರಿಗೆ ಶೇ. ನೂರರಷ್ಟು ಮುಖ್ಯಮಂತ್ರಿ ಆಗುವ ಅವಕಾಶವಿದೆ. ಅವರು ಆಗಬೇಕು ಕೂಡ ಎಂದು ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಡಿಕೆ ಶಿವಕುಮಾರ್‌ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ.

ಬೆಂಗಳೂರು ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಪರವಾಗಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಹಿತ್ತಲ ಬಾಗಿಲಿನಿಂದ ಯಾರ‍್ಯಾರೊ ಬಂದು ಸಿ.ಎಂ ಆಗಿದ್ದಾರೆ. ಆದರೆ, ಡಿಕೆ ಶಿವಕುಮಾರ್ ಅವರು ನಮ್ಮೂರು ಮನೆಮಗ. ಹಾಗಾಗಿ ಅವರು ಆದಷ್ಟು ಬೇಗ ಸಿಎಂ ಆಗಲಿ ಎಂದು ಆಶಿಸುತ್ತೇನೆʼʼ ಎಂದು ಹೇಳಿದರು.

ʻʻನಾನು ಶಿವಕುಮಾರ್ ಪರ ಇದ್ದೇನೆ. ಅವರು ಹಿಂದಿನಿಂದ ಬಹಳ ಕಷ್ಟಪಟ್ಟಿದ್ದಾರೆ. ಬಹಳಷ್ಟು ಮಂದಿ ಹಿತ್ತಲ ಬಾಗಿಲಿನಿಂದ ಬಂದು ಸಿಎಂ ಆಗಿದ್ದಾರೆ. ನಾನು ಅವರ ಹೆಸರೇಳಲು ಇಷ್ಟಪಡಲ್ಲ, ಆದರೆ, ರಾಜ್ಯದಲ್ಲಿ ಬಹಳಷ್ಟು ಜನ ಆ ರೀತಿ ಮುಖ್ಯಮಂತ್ರಿಯಾಗಿದ್ದಾರೆ. ದೇವೇಗೌಡರು ಹಾಗೂ ಸಿದ್ದರಾಮಯ್ಯ ಹೋರಾಟ ಮಾಡಿಕೊಂಡು ಬಂದವರು. ಆದರೆ, ಕೆಲವು ಮಂದಿ ಹಿತ್ತಲ ಬಾಗಿಲಿನಿಂದ ಬಂದು ಸಿಎಂ ಆದರುʼʼ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಗೆ ಪುಟ್ಟಣ್ಣ ಟಾಂಗ್​ ನೀಡಿದರು.

ಈ ವೇಳೆ ಮಾಧ್ಯಮದವರು, ಇದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಹೇಳಿದ ಹೇಳಿಕೆಯೇ? ಎಂದು ಕೇಳಿದಾಗ, ಸಿದ್ದರಾಮಯ್ಯ ಅವರು ಹೋರಾಟದ ಮೂಲಕ ಮುಖ್ಯಮಂತ್ರಿಯಾಗಿದ್ದಾರೆ. ಉಳಿದ ಎಷ್ಟೋ ಮಂದಿ ಹಿತ್ತಲ ಬಾಗಿಲಿನಿಂದ ಬಂದು ಆ ಹುದ್ದೆಗೇರಿದ್ದಾರೆ ಎಂದು ಸಮಜಾಯಿಷಿ ನೀಡಿದರು.

​ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿ, ರಾಜ್ಯದಲ್ಲಿ 23 - 25 ಸೀಟುಗಳು ಕಾಂಗ್ರೆಸ್ ಬರಲಿದೆ. ಬೆಂಗಳೂರಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ರಾಜದಯದಲ್ಲಿ 20 ಕ್ಷೇತ್ರಗಳಲ್ಲಿಯಂತೂ ಗ್ಯಾರಂಟಿ ಬರುತ್ತದೆ. ಇದೆಲ್ಲಾ ಗ್ಯಾರಂಟಿ ಯೋಜನೆಯ ಅಂಡರ್ ಕರೆಂಟ್. ಶೇ.80ರಷ್ಟು ಮಹಿಳೆಯರು ಕಾಂಗ್ರೆಸ್‌ಗೆ ಮತ ನೀಡಿದ್ದಾರೆ ಎಂದು ಹೇಳಿದರು.

Read More
Next Story