
ಮಚ್ಚಿಗೆ ಪೂಜೆ ಮಾಡಿಸುತ್ತಿರುವ ರೌಡಿ ವಿಶ್ವ
ಶಿವಮೊಗ್ಗದಲ್ಲಿ ರೌಡಿಗಳ ಅಟ್ಟಹಾಸ; ದೇವಸ್ಥಾನದಲ್ಲಿ ಮಚ್ಚು ಪೂಜೆ, ರೌಡಿಯಿಂದ ಫೈರಿಂಗ್
ಭದ್ರಾವತಿಯ ನಗರದ ದೇವಸ್ಥಾನ ಒಂದರಲ್ಲಿ ರೌಡಿಶೀಟರ್ ವಿಶ್ವ ದೇವಸ್ಥಾನದಲ್ಲಿ ಮಚ್ಚನ್ನು ಅರ್ಚಕರಿಂದ ಪೂಜೆ ಮಾಡಿಸಿದ್ದ. ಈ ಮೂಲಕ ರೌಡಿ ಗಾಂಧಿ ವಿರುದ್ದ ಪ್ರತೀಕಾರ ತೀರಿಸಿಕೊಳ್ಳಲು ಶಪಥ ಮಾಡಿದ್ದ.
ಶಿವಮೊಗ್ಗ ಜಿಲ್ಲೆಯಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದೆ. ದೇವಸ್ಥಾನವೊಂದರಲ್ಲಿ ಮಚ್ಚಿಗೆ ಪೂಜೆ ಮಾಡಿಸಿರುವುದಲ್ಲದೆ ಬಡಾವಣೆಯೊಂದರಲ್ಲಿ ರೌಡಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿರುವುದು ಹಾಗೂ ಮಚ್ಚು, ಲಾಂಗ್ ಹಿಡಿದು ರೌಡಿಯನ್ನು ಹಾಡುಹಗಲೇ ಕೊಲೆ ಮಾಡಲು ಅಟ್ಟಾಡಿಸಿಕೊಂಡು ಹೋಗಿರುವ ಘಟನೆ ನಡೆದಿದೆ.
ಈ ಮೂರು ಘಟನೆಯಿಂದ ನಗರದ ಜನರು ಬೆಚ್ಚಿಬಿದ್ದಿದ್ದಾರೆ. ಶಿವಮೊಗ್ಗದ ಟಿಪ್ಪು ನಗರದ ಬಡಾವಣೆಯಲ್ಲಿ ಮಹ್ಮದ್ ಇರ್ಫಾನ್ ಎಂಬ ರೌಡಿಶೀಟರ್ ರಾತ್ರಿ ಹೊತ್ತಿಲ್ಲಿನಲ್ಲಿ ಗನ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಜನರಲ್ಲಿ ಆತಂಕ ಮೂಡಿಸಿದ್ದ. ಆದರೆ ರೌಡಿಶೀಟರ್ ಕೈಗೆ ಗನ್ ಬಂದಿದ್ದು ಹೇಗೆ ಎನ್ನುವುದು ಮಾತ್ರ ನಿಗೂಢ. ಈ ಬಗ್ಗೆ ತುಂಗಾ ನಗರ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಫೈರಿಂಗ್ ಆಗಿರುವುದು ಏರ್ ಗನ್ನಿಂದ ಎಂದು ದೂರು ದಾಖಲಿಕೊಂಡು, ರೌಡಿಶೀಟರ್ನನ್ನ ಪೊಲೀಸರು ಬಂಧಿಸಿದ್ದಾರೆ.
ಕೂದಳೆಲೆಯ ಅಂತರದಲ್ಲಿ ಪಾರಾದ ರೌಡಿ
ಭದ್ರಾವತಿಯ ಮುಖ್ಯ ರಸ್ತೆಯಲ್ಲಿ ಪ್ರಮೋದ್ ಅಲಿಯಾಸ್ ಗಾಂಧಿ ರೌಡಿ ಗ್ಯಾಂಗ್, ರೌಡಿ ಶೀಟರ್ ವಿಶ್ವ ಅಲಿಯಾಸ್ ಮುದ್ದೆಯನ್ನು ಅಟ್ಟಾಡಿಸಿಕೊಂಡು ಮಚ್ಚು, ಲಾಂಗ್ನಿಂದ ದಾಳಿ ನಡೆಸಿತ್ತು. ಆದರೆ ಈ ದಾಳಿಯಲ್ಲಿ ವಿಶ್ವ ಕೂದಳೆಲೆ ಅಂತರದಲ್ಲಿ ಬಚಾವಾಗಿದ್ದ.
ಪ್ರಮೋದ್ ಅಲಿಯಾಸ್ ಗಾಂಧಿ ಎನ್ನುವ ರೌಡಿಶೀಟರ್ ಮೇಲೆ ರೌಡಿ ವಿಶ್ವ, ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದ. ಸೇಡು ತೀರಿಸಿಕೊಳ್ಳಲು ಪ್ರಮೋದ್ ಹಾಡುಹಗಲೇ ಮಚ್ಚಿನಿಂದ ವಿಶ್ವನ ಮೇಲೆ ದಾಳಿ ನಡೆಸಲು ಯತ್ನಿಸಿದ್ದ. ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಭದ್ರಾವತಿಯ ನಗರದ ದೇವಸ್ಥಾನ ಒಂದರಲ್ಲಿ ರೌಡಿಶೀಟರ್ ವಿಶ್ವ, ಮಚ್ಚನ್ನು ಅರ್ಚಕರಿಂದ ಪೂಜೆ ಮಾಡಿಸಿದ್ದ. ಈ ಮೂಲಕ ರೌಡಿ ಗಾಂಧಿ ವಿರುದ್ದ ಪ್ರತೀಕಾರ ತೀರಿಸಿಕೊಳ್ಳಲು ಶಪಥ ಮಾಡಿದ್ದ ಎಂದು ಹೇಳಲಾಗಿದೆ.