DKS Apology | If you want a seat in Congress, you should give up patriotism: R. Ashok
x

ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

"ದುಡ್ಡು ಹೊಡೆಯುವ ಸುರಂಗ ರಸ್ತೆ ಬೇಡ: ಸರ್ಕಾರಕ್ಕೆ ಆರ್. ಅಶೋಕ್ ಆಗ್ರಹ

ಬಿಹಾರ ಚುನಾವಣೆಗೆ ನೀವು 400 ಕೋಟಿ ರೂಪಾಯಿ ಕಳುಹಿಸಿದ್ದೀರಿ, ಆದರೆ ಅದು ಈಗ 'ಗೋವಿಂದ' ಆಗಿದೆ," ಎಂದು ಅಶೋಕ್ ವ್ಯಂಗ್ಯವಾಡಿದರು.


ರಾಜ್ಯ ಕಾಂಗ್ರೆಸ್ ಸರ್ಕಾರವು ಪ್ರಸ್ತಾಪಿಸಿರುವ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಸುರಂಗ ರಸ್ತೆ ಯೋಜನೆಯು "ದುಡ್ಡು ಹೊಡೆಯುವ ಸ್ಕೀಂ" ಆಗಿದ್ದು, ಇದರಿಂದ ಪರಿಸರ ನಾಶವಾಗುವುದಲ್ಲದೆ, ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ. ಇದರ ಬದಲು, ಈಗಾಗಲೇ ಯಶಸ್ವಿಯಾಗಿರುವ ಮತ್ತು ಜನೋಪಯೋಗಿ ಎನಿಸಿರುವ 'ನಮ್ಮ ಮೆಟ್ರೋ' ಯೋಜನೆಯನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

ಸ್ಯಾಂಕಿ ಕೆರೆ ಸಂರಕ್ಷಣೆಗೆ ಹೋರಾಟ

ಮಲ್ಲೇಶ್ವರದ ಸ್ಯಾಂಕಿ ಕೆರೆ ಬಳಿ, ಕೆರೆಯ ಸಂರಕ್ಷಣೆಗಾಗಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನ ಮತ್ತು ಪರಿಶೀಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕಾಂಗ್ರೆಸ್ ಸರ್ಕಾರವು ಪ್ರಕೃತಿ ನಾಶ, ಕೆರೆಗಳ ಅತಿಕ್ರಮಣ ಮತ್ತು ಅವೈ ಮೇಲುಸೇತುವೆಗಳ ನಿರ್ಮಾಣದ ಮೂಲಕ ಬೆಂಗಳೂರನ್ನು ಹಾಳುಮಾಡುತ್ತಿದೆ. ಈಗ ಸ್ಯಾಂಕಿ ಕೆರೆಯ ನಾಶಕ್ಕೂ ಮುಂದಾಗಿದೆ," ಎಂದು ಆರೋಪಿಸಿದರು.

"ಬಿಹಾರಕ್ಕೆ ಕಳುಹಿಸಿದ 400 ಕೋಟಿ ಗೋವಿಂದ"

ಇದೇ ಸಂದರ್ಭದಲ್ಲಿ, "ಬಿಹಾರ ಚುನಾವಣೆಗೆ ನೀವು 400 ಕೋಟಿ ರೂಪಾಯಿ ಕಳುಹಿಸಿದ್ದೀರಿ, ಆದರೆ ಅದು ಈಗ 'ಗೋವಿಂದ' ಆಗಿದೆ," ಎಂದು ಅಶೋಕ್ ವ್ಯಂಗ್ಯವಾಡಿದರು. ಸರ್ಕಾರದ ಹಣಕಾಸು ನಿರ್ವಹಣೆಯ ಬಗ್ಗೆಯೂ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸುರಂಗ ರಸ್ತೆಯ ಅವೈಜ್ಞಾನಿಕತೆ

ಸುರಂಗ ರಸ್ತೆ ಯೋಜನೆಯ ಬಗ್ಗೆ ಪ್ರಶ್ನಿಸಿದ ಅವರು, "ಈ ಯೋಜನೆಯಿಂದ ಪರಿಸರ ಹಾಳಾಗುತ್ತದೆ. ಸುರಂಗ ತೋಡಿದ ಕಲ್ಲು, ಮಣ್ಣನ್ನು ಎಲ್ಲಿ ವಿಲೇವಾರಿ ಮಾಡುತ್ತೀರಿ? ಸಾವಿರಾರು ಕೋಟಿ ಖರ್ಚು ಮಾಡಿದರೆ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆಯೇ?" ಎಂದು ಕೇಳಿದರು. "ಯಾವುದೇ ಸಮರ್ಪಕ ಯೋಜನೆ ಇಲ್ಲದೆ, ಕೇವಲ ಟೆಂಡರ್ ಕರೆದು ಹಣ ಲೂಟಿ ಮಾಡುವುದೇ ಈ ಯೋಜನೆಯ ಉದ್ದೇಶ," ಎಂದು ಅವರು ಗಂಭೀರ ಆರೋಪ ಮಾಡಿದರು.

ಮೆಟ್ರೋ ಯೋಜನೆಯೇ ಪರಿಹಾರ

ಬೆಂಗಳೂರಿನಲ್ಲಿ ಮೆಟ್ರೋ ಯೋಜನೆ ಅತ್ಯಂತ ಯಶಸ್ವಿಯಾಗಿದ್ದು, ಪ್ರತಿದಿನ ಸುಮಾರು 60 ಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಪ್ರಯಾಣಿಸುತ್ತಾರೆ ಎಂದು ಉಲ್ಲೇಖಿಸಿದ ಅಶೋಕ್, ಸಂಚಾರ ದಟ್ಟಣೆ ನಿವಾರಣೆಗೆ ಮೆಟ್ರೋ ಜಾಲವನ್ನು ವಿಸ್ತರಿಸುವುದೇ ಸೂಕ್ತ ಪರಿಹಾರ ಎಂದರು. ಬಿಜೆಪಿ ಅಭಿವೃದ್ಧಿಯ ವಿರೋಧಿಯಲ್ಲ, ಆದರೆ ಅವೈಜ್ಞಾನಿಕ ಮತ್ತು ಜನವಿರೋಧಿ ಯೋಜನೆಗಳನ್ನು ಖಂಡಿತವಾಗಿಯೂ ವಿರೋಧಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

"ಬೆಂಗಳೂರಿನ ಜನರು ಈಗಾಗಲೇ ಕಸ, ನೀರು ಸೇರಿದಂತೆ ಎಲ್ಲದರ ಮೇಲೂ ತೆರಿಗೆ ಭಾರದಿಂದ ಬಳಲುತ್ತಿದ್ದಾರೆ. ಇದರ ಜೊತೆಗೆ ಇಂತಹ ಯೋಜನೆಗಳು ಅವರಿಗೆ ಮತ್ತಷ್ಟು ಹೊರೆಯಾಗಬಾರದು," ಎಂದು ಅಶೋಕ್ ಹೇಳಿದರು.

Read More
Next Story