Loksabha Election 2024 | ದಳಪತಿಗಳಿಗೆ ಬಿಗ್‌ ಶಾಕ್: ಡಿಕೆಶಿ ಮಿಡ್‌ನೈಟ್‌ ʻಆಪರೇಷನ್‌ ಹಸ್ತʼ
x

Loksabha Election 2024 | ದಳಪತಿಗಳಿಗೆ ಬಿಗ್‌ ಶಾಕ್: ಡಿಕೆಶಿ ಮಿಡ್‌ನೈಟ್‌ ʻಆಪರೇಷನ್‌ ಹಸ್ತʼ


ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ ಸುರೇಶ್‌ ಅವರನ್ನು ಶತಾಯಗತಾಯ ಗೆಲ್ಲಿಸಿಕೊಂಡು ಬರಬೇಕು ಎಂದು ಪಣ ತೊಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ರಾತ್ರೋರಾತ್ರಿ ಭರ್ಜರಿ ಆಪರೇಷನ್ ಮಾಡಿದ್ದಾರೆ. ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಆಪ್ತವಲಯದಲ್ಲಿರುವ ಚನ್ನಪಟ್ಟಣ ಜೆಡಿಎಸ್ ಮುಖಂಡರನ್ನು ರಾತ್ರೋರಾತ್ರಿ ಡಿಕೆಶಿ ಕಾಂಗ್ರೆಸ್‌ಗೆ ಸೆಳೆದಿದ್ದಾರೆ. ಅಲ್ಲದೇ ರಾತ್ರಿಯೇ ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

ಸದ್ದಿಲ್ಲದೆ ಕಳೆದ ರಾತ್ರಿ ಚನ್ನಪಟ್ಟಣದ ಜೆಡಿಎಸ್ ನಾಯಕರಾದ ಅಕ್ಕೂರುದೊಡ್ಡಿ ಶಿವಣ್ಣ ಸೇರಿದಂತೆ ಬರೋಬ್ಬರಿ 400 ಕ್ಕೂ ಮುಖಂಡರನ್ನು ಡಿ ಕೆ ಶಿವಕುಮಾರ್ ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಂಡಿದ್ದು, ದಳಪತಿಗಳಿ ಬಿಗ್‌ ಶಾಕ್‌ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ʻʻಚನ್ನಪಟ್ಟಣ ಭಾಗದ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕುಮಾರಸ್ವಾಮಿ ಈಗಾಗಲೇ ಮಂಡ್ಯಗೆ ಹೊರಟು ಹೋಗಿದ್ದಾರೆ. ಆದರೆ, ಕುಮಾರಸ್ವಾಮಿ ಮಂಡ್ಯದಲ್ಲೂ ಗೆಲ್ಲಲ್ಲ" ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ, "ಇನ್ನೂ ಸಾಕಷ್ಟು ಜನ ನಮ್ಮ ಪಕ್ಷ ಸೇರಿಕೊಳ್ಳಲಿದ್ದಾರೆ, ಎಲ್ಲರಿಗೂ ಸ್ವಾಗತ ಮಾಡುತ್ತೇನೆ" ಎಂದಿದ್ದಾರೆ.

ʻʻಜೆಡಿಎಸ್ ಪಕ್ಷ ಈ ಬಾರಿ ನಾಲ್ಕೂ ಸ್ಥಾನಗಳಲ್ಲಿ ಸೋಲಲಿದೆ ಎಂದು ಡಿಕೆಶಿ ಭವಿಷ್ಯ ನುಡಿದಿದ್ದಾರೆ. ರಾಜ್ಯದ ಜನರಿಗೆ ಸುಖ ಶಾಂತಿ‌ ನೆಮ್ಮದಿ ಸಿಗಲಿ, ಗ್ಯಾರಂಟಿ ಚೆಕ್ ಬೌನ್ಸ್ ಆಗದ ರೀತಿ‌ ನೋಡಿಕೊಂಡಿದ್ದೇವೆ. ಈಗ ಮಲ್ಲಿಕಾರ್ಜುನ ಖರ್ಗೆ ಅವರು ಹೊಸ‌ ಗ್ಯಾರಂಟಿಗೆ‌ ಸಹಿ‌ ಹಾಕಿದ್ದಾರೆ, ಕೊಟ್ಟ ಮಾತಿಗೆ ನಾವು ತಪ್ಪೋದಿಲ್ಲ. 420 ಗ್ಯಾರಂಟಿ ಎಂದು ವ್ಯಾಖ್ಯಾನ ಮಾಡಿದ್ದರು. ಆದರೆ ನಾವು‌ ಬಜೆಟ್ ಮೂಲಕ ಬಾಯಿ ಮುಚ್ಚಿಸಿದ್ದೇವೆʼʼ ಎಂದು ಬಿಜೆಪಿ-ಜೆಡಿಎಸ್‌ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Read More
Next Story