
ಕಾಂತಾರದ ಉಮೇಶ್ ಪಂಬದ, ನಟ ಪ್ರಕಾಶ್ ರಾಜ್, ಸಾಹಿತಿ ರಹಮತ್ ತರೀಕೆರೆ ಸೇರಿ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಸಾಹಿತ್ಯ, ಜಾನಪದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 70 ಮಂದಿ ಸಾಧಕರಿಗೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.
2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ನಟ ಪ್ರಕಾಶ್ ರಾಜ್, ಸಾಹಿತಿಗಳಾದ ರಹಮತ್ ತರೀಕೆರೆ, ಎಚ್.ಎಲ್.ಪುಷ್ಪಾ, ಪ್ರೊ.ರಾಜೇಂದ್ರ ಚೆನ್ನಿ ಶಿವಮೊಗ್ಗ ಸೇರಿದಂತೆ 70ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಗೆ ಆಯ್ಕೆಯಾದವರಲ್ಲಿ13ಮಂದಿ ಮಹಿಳಾ ಸಾಧಕರಿದ್ದಾರೆ. ಪ್ರಶಸ್ತಿಯು 5 ಲಕ್ಷ ನಗದು,25 ಗ್ರಾಂ ಚಿನ್ನ ಹಾಗೂ ಸ್ಮರಣಿಕೆ ಒಳಗೊಂಡಿರಲಿದೆ. ನ. 1 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವಕ್ಕೆ ಅರ್ಜಿ ಆಹ್ವಾನಿಸಲಾಗುತ್ತಿತ್ತು. ಆದರೆ, ಈ ವರ್ಷ ಅರ್ಜಿ ಆಹ್ವಾನಿಸಿರಲಿಲ್ಲ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯೇ ಅರ್ಹ ಸಾಧಕರನ್ನು ಗುರುತಿಸಿ, ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸಾಹಿತ್ಯ ಕ್ಷೇತ್ರ
ತುಂಬಾಡಿ ರಾಮಯ್ಯ(ತುಮಕೂರು), ಪ್ರೊ.ಆರ್. ಸುನಂದಮ್ಮ(ಚಿಕ್ಕಬಳ್ಳಾಪುರ), ಡಾ.ಎಚ್.ಎಲ್ ಪುಷ್ಪ(ತುಮಕೂರು), ರಹಮತ್ ತರೀಕೆರೆ(ಚಿಕ್ಕಮಗಳೂರು), ಹ.ಮ.ಪೂಜಾರ(ವಿಜಯಪುರ).
ಜಾನಪದ ಕ್ಷೇತ್ರ
ಬಸಪ್ಪ ಭರಮಪ್ಪ ಚೌಡ್ಕಿ(ಕೊಪ್ಪಳ), ಬಿ.ಟಾಕಪ್ಪ ಕಣ್ಣೂರು(ಶಿವಮೊಗ್ಗ),ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ (ಬೆಳಗಾವಿ), ಹನುಮಂತಪ್ಪ, ಮಾರಪ್ಪ, ಚೀಳಂಗಿ(ಚಿತ್ರದುರ್ಗ), ಎಂ. ತೋಪಣ್ಣ(ಕೋಲಾರ), ಸೋಮಣ್ಣ ದುಂಡಪ್ಪ ಧನಗೊಂಡ(ವಿಜಯಪುರ), ಸಿಂಧು ಗುಜರನ್(ದಕ್ಷಿಣ ಕನ್ನಡ), ಎಲ್. ಮಹದೇವಪ್ಪ ಉಡಿಗಾಲ(ಮೈಸೂರು).
ಸಂಗೀತ ಕ್ಷೇತ್ರ
ದೇವೆಂದ್ರಕುಮಾರ ಪತ್ತಾರ್(ಕೊಪ್ಪಳ), ಮಡಿವಾಳಯ್ಯ ಸಾಲಿ(ಬೀದರ್).
ನೃತ್ಯ
ಪ್ರೊ. ಕೆ. ರಾಮಮೂರ್ತಿ ರಾವ್(ಮೈಸೂರು)
ಚಲನಚಿತ್ರ /ಕಿರುತೆರೆ
ಪ್ರಕಾಶ್ ರಾಜ್(ದಕ್ಷಿಣ ಕನ್ನಡ), ವಿಜಯಲಕ್ಷ್ಮೀ ಸಿಂಗ್ (ಕೊಡಗು)
ಆಡಳಿತ
ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ),(ಬೆಂಗಳೂರು ದಕ್ಷಿಣ-ರಾಮನಗರ)
ವೈದ್ಯಕೀಯ
ಡಾ. ಆಲಮ್ಮ ಮಾರಣ್ಣ(ತುಮಕೂರು), ಡಾ. ಜಯರಂಗನಾಥ್(ಬೆಂಗಳೂರು ಗ್ರಾಮಾಂತರ).
ಸಮಾಜ ಸೇವೆ
ಸೂಲಗಿತ್ತಿ ಈರಮ್ಮ(ವಿಜಯನಗರ), ಫಕ್ಕೀರಿ(ಬೆಂಗಳೂರು ಗ್ರಾಮಾಂತರ), ಕೋರಿನ್ ಆಂಟೊನಿಯಟ್ ರಸ್ಕೀನಾ(ದಕ್ಷಿಣ ಕನ್ನಡ), ಡಾ. ಎನ್. ಸೀತಾರಾಮ ಶೆಟ್ಟಿ(ಉಡುಪಿ), ಕೋಣಂದೂರು ಲಿಂಗಪ್ಪ(ಶಿವಮೊಗ್ಗ), ಉಮೇಶ ಪಂಬದ(ದಕ್ಷಿಣ ಕನ್ನಡ), ಡಾ. ರವೀಂದ್ರ ಕೋರಿಶೆಟ್ಟಿರ್(ಧಾರವಾಡ), ಕೆ.ದಿನೇಶ್(ಬೆಂಗಳೂರು), ಶಾಂತರಾಜು(ತುಮಕೂರು), ಜಾಫರ್ ಮೊಹಿಯುದ್ದೀನ್(ರಾಯಚೂರು), ಪೆನ್ನ ಓಬಳಯ್ಯ( ಬೆಂಗಳೂರು ಗ್ರಾಮಾಂತರ), ಶಾಂತಿ ಬಾಯಿ(ಬಳ್ಳಾರಿ), ಪುಂಡಲೀಕ ಶಾಸ್ತ್ರೀ(ಬುಡಬುಡಕೆ)(ಬೆಳಗಾವಿ).
ಹೊರನಾಡು/ ಹೊರದೇಶ
ಜಕರಿಯ ಬಜಪೆ (ಸೌದಿ)
ಪಿ ವಿ ಶೆಟ್ಟಿ (ಮುಂಬೈ)
ಪರಿಸರ
ರಾಮೇಗೌಡ(ಚಾಮರಾಜನಗರ), ಮಲ್ಲಿಕಾರ್ಜುನ ನಿಂಗಪ್ಪ(ಯಾದಗಿರಿ).
ಕೃಷಿ
ಡಾ.ಎಸ್.ವಿ.ಹಿತ್ತಲಮನಿ(ಹಾವೇರಿ), ಎಂ ಸಿ ರಂಗಸ್ವಾಮಿ(ಹಾಸನ).
ಮಾಧ್ಯಮ
ಕೆ.ಸುಬ್ರಮಣ್ಯ(ಬೆಂಗಳೂರು), ಅಂಶಿ ಪ್ರಸನ್ನಕುಮಾರ್(ಮೈಸೂರು), ಬಿ.ಎಂ ಹನೀಫ್(ದಕ್ಷಿಣ ಕನ್ನಡ), ಎಂ.ಸಿದ್ಧರಾಜು(ಮಂಡ್ಯ).
ವಿಜ್ಞಾನ ಮತ್ತು ತಂತ್ರಜ್ಞಾನ
ರಾಮಯ್ಯ(ಚಿಕ್ಕಬಳ್ಳಾಪುರ), ಏರ್ ಮಾರ್ಷಲ್ ಫೀಲೀಪ್ ರಾಜಕುಮಾರ್(ದಾವಣಗೆರೆ), ಡಾ. ಆರ್. ವಿ ನಾಡಗೌಡ
(ಗದಗ).

