ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: IPS ಅಧಿಕಾರಿಗಳಿಗೆ ಮುಂಬಡ್ತಿ, ಕೆಲವರ ವರ್ಗಾವಣೆ
x

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: IPS ಅಧಿಕಾರಿಗಳಿಗೆ ಮುಂಬಡ್ತಿ, ಕೆಲವರ ವರ್ಗಾವಣೆ

ಕರ್ನಾಟಕ ಸರ್ಕಾರ 48 ಐಪಿಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ ಮತ್ತು ಮುಂಬಡ್ತಿ ನೀಡಿದ್ದು, ಬೆಂಗಳೂರು ಡಿಸಿಪಿಗಳು ಮತ್ತು ವಿವಿಧ ಜಿಲ್ಲೆಗಳ ಎಸ್‌ಪಿಗಳ ಬದಲಾವಣೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.


ಹೊಸ ವರ್ಷದ ಸ್ವಾಗತದ ಸಂಭ್ರಮದ ನಡುವೆಯೇ ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ದೊಡ್ಡ ಮಟ್ಟದ ಚುರುಕು ಮುಟ್ಟಿಸಿದೆ. ಬೆಂಗಳೂರು ನಗರದ ಪ್ರಮುಖ ವಿಭಾಗಗಳ ಡಿಸಿಪಿಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಎಸ್‌ಪಿ ಹಾಗೂ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಹಲವರಿಗೆ ಐಜಿಪಿ ಮತ್ತು ಡಿಐಜಿಪಿ ಹುದ್ದೆಗೆ ಪದೋನ್ನತಿ ನೀಡಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ನಗರದ ನೂತನ ಡಿಸಿಪಿಗಳು

ರಾಜಧಾನಿಯ ಕಾನೂನು ಸುವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಡಿಸಿಪಿ ಹುದ್ದೆಗಳಿಗೆ ಹೊಸ ಅಧಿಕಾರಿಗಳ ನೇಮಕವಾಗಿದೆ:

• ವೈಟ್‌ಫೀಲ್ಡ್ ವಿಭಾಗ: ಸೈದುಲು ಅದಾವತ್

• ಪಶ್ಚಿಮ ವಿಭಾಗ: ಯತೀಶ್ ಎನ್.

• ಈಶಾನ್ಯ ವಿಭಾಗ: ಮಿಥುನ್ ಕುಮಾರ್

• ಪೂರ್ವ ವಿಭಾಗ: ವಿಕ್ರಮ್ ಆಮ್ಟೆ

• ಆಗ್ನೇಯ ವಿಭಾಗ: ಮಹಮ್ಮದ್ ಸುಜೀತಾ ಎಂ.ಎಸ್.

ಪ್ರಮುಖ ಮುಂಬಡ್ತಿ ಮತ್ತು ವರ್ಗಾವಣೆಗಳು

ಐಜಿಪಿ ಪದೋನ್ನತಿ: ದಕ್ಷಿಣ ವಲಯದ ಡಿಐಜಿಪಿ ಆಗಿದ್ದ ಡಾ. ಎಂ.ಬಿ. ಬೋರಲಿಂಗಯ್ಯ ಹಾಗೂ ಬೆಂಗಳೂರು ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿದ್ದ ಅಜಯ್ ಹಿಲೋರಿ ಅವರಿಗೆ ಐಜಿಪಿ (IGP) ಆಗಿ ಮುಂಬಡ್ತಿ ನೀಡಲಾಗಿದೆ.

ಡಿಐಜಿಪಿ ಮುಂಬಡ್ತಿ: ಬೆಳಗಾವಿ ಎಸ್‌ಪಿ ಆಗಿದ್ದ ಭೀಮಾಶಂಕರ್ ಗುಳೇದ್ ಸೇರಿದಂತೆ ಒಟ್ಟು 22 ಅಧಿಕಾರಿಗಳಿಗೆ ಡಿಐಜಿಪಿ (DIGP) ಹುದ್ದೆಗೆ ಪದೋನ್ನತಿ ನೀಡಿ ವಿವಿಧೆಡೆ ನಿಯೋಜಿಸಲಾಗಿದೆ.

ಜಿಲ್ಲಾ ಎಸ್‌ಪಿಗಳ ಬದಲಾವಣೆ

ಕೆ. ರಾಮರಾಜನ್: ಬೆಳಗಾವಿ ಜಿಲ್ಲೆ

ಬಿ. ನಿಖಿಲ್: ಶಿವಮೊಗ್ಗ

ಅರುಣಾಂಶು ಗಿರಿ: ರಾಯಚೂರು

ಶುಭನ್ವಿತಾ: ಎಸ್‌ಪಿ, ಹಾಸನ

ಜಿತೇಂದ್ರ ಕುಮಾರ್ ದಯಾಮ್: ಚಿಕ್ಕಮಗಳೂರು

ಕನ್ನಿಕಾ ಸಿಕ್ರಿವಾಲ್: ಕೋಲಾರ ಜಿಲ್ಲೆ

ಬಿಂದು ಮಣಿ: ಕೊಡಗು ಜಿಲ್ಲೆ

ಶೋಭಾರಾಣಿ: ಮಂಡ್ಯ

ಮುತ್ತುರಾಜು ಎಂ: ಚಾಮರಾಜನಗರ

ಪವನ್ ನೆಜ್ಜೂರ್: ಬಳ್ಳಾರಿ

ಮಲ್ಲಿಕಾರ್ಜುನ ಬಾಲದಂಡಿ: ಮೈಸೂರು

ಯಾರು ಯಾವ ಹುದ್ದೆಗೆ ವರ್ಗಾವಣೆ?

ಭೀಮಾಶಂಕರ್ ಗುಳೇದ್: ಎಸ್‌ಪಿ, ಬೆಳಗಾವಿ ಜಿಲ್ಲೆ - ಡಿಐಜಿಪಿ, ಸಿಐಡಿ

ಇಲಾಕ್ಕಿಯ ಕರುಣಾಕರನ್ : ಎನ್‌ಎಚ್‌ಆರ್‌ಸಿ - ಡಿಐಜಿಪಿ, ವೈರ್‌ಲೆಸ್

ವೇದಮೂರ್ತಿ: ಎಸ್‌ಪಿ, ರಾಜ್ಯ ಗುಪ್ತಚರ - ಡಿಐಜಿಪಿ, ರಾಜ್ಯ ಗುಪ್ತಚರ

ಕೆ.ಎಂ. ಶಾಂತರಾಜು: ಎಸ್‌ಪಿ, ಐಎಸ್‌ಡಿ - ಡಿಐಜಿಪಿ, ಐಎಸ್‌ಡಿ

ಹನುಮಂತರಾಯ: ಎಸ್‌ಪಿ, ಕೆಎಲ್‌ಎ - ಡಿಐಜಿಪಿ, ಎಸ್‌ಎಚ್‌ಆರ್‌ಸಿ

ಡಿ. ದೇವರಾಜು: ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು - ಡಿಐಜಿಪಿ, ತರಬೇತಿ

ಡಾ. ಸಿರಿ ಗೌರಿ: ಎಸ್‌ಪಿ, ಎಸ್‌ಸಿಆರ್‌ಬಿ - ಡಿಐಜಿಪಿ, ಕರ್ನಾಟಕ ಲೋಕಾಯುಕ್ತ

ಡಾ. ಕೆ. ಧರಣಿ ದೇವಿ: ಎಸ್‌ಪಿ, ಡಿಸಿಆರ್‌ಇ - ಡಿಐಜಿಪಿ, ಗುಪ್ತಚರ

ಎಸ್. ಸವಿತಾ: ಎಸ್‌ಪಿ, ಸಿಐಡಿ - ಡಿಐಜಿಪಿ, ಗೃಹ ರಕ್ಷಕ ದಳ

ಸಿ.ಕೆ. ಬಾಬಾ: ಎಸ್‌ಪಿ, ಬೆಂಗಳೂರು ಗ್ರಾಮಾಂತರ - ಡಿಐಜಿಪಿ, ಕೆಎಸ್‌ಆರ್‌ಪಿ

ಅಬ್ದುಲ್ ಅಹದ್: ನಿರ್ದೇಶಕರು, ಬಿಎಂಟಿಸಿ - ನಿರ್ದೇಶಕರು, ಬಿಎಂಟಿಸಿ

ಎಸ್. ಗಿರೀಶ್: ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು - ಡಿಐಜಿಪಿ, ಎಎನ್‌ಟಿಎಫ್

ಎಂ. ಪುಟ್ಟಮಾದಯ್ಯ: ಎಸ್‌ಪಿ, ರಾಯಚೂರು - ಡಿಐಜಿಪಿ, ಪ್ರಾಂಶುಪಾಲರು, ಪಿಟಿಸಿ ಕಲಬುರಗಿ

ಟಿ. ಶ್ರೀಧರ: ಎಸ್‌ಪಿ, ಡಿಸಿಆರ್‌ಇ - ಡಿಐಜಿಪಿ, ಕೇಂದ್ರ ಕಚೇರಿ

ಎ.ಎನ್. ಪ್ರಕಾಶ್ ಗೌಡ: ಎಸ್‌ಪಿ, ಐಎಸ್‌ಡಿ - ಡಿಐಜಿಪಿ, ಎಸ್‌ಎಎಫ್

ಜಿನೇಂದ್ರ ಖಾನಗಾವಿ: ಎಸ್‌ಪಿ, ಐಎಸ್‌ಡಿ - ಡಿಐಜಿಪಿ, ಕಾರಾಗೃಹ

ಜೆ.ಕೆ. ರಶ್ಮಿ: ಡೆಪ್ಯುಟಿ ಕಮಾಂಡೆಂಟ್, ಗೃಹ ರಕ್ಷಕ - ಡಿಐಜಿಪಿ, ರೈಲ್ವೆ

ಟಿ.ಪಿ. ಶಿವಕುಮಾರ್: ಎಸ್‌ಪಿ, ಕೆಪಿಸಿಎಲ್ - ಡಿಐಜಿಪಿ, ಎಸ್‌ಸಿಆರ್‌ಬಿ

ವಿಷ್ಣುವರ್ಧನ: ಎಸ್‌ಪಿ, ಮೈಸೂರು ಜಿಲ್ಲೆ - ನಿರ್ದೇಶಕರು, ಕೆಪಿಎ

ಡಾ.ಸಂಜೀವ್ ಎಂ ಪಾಟೀಲ್: ಎಐಜಿಪಿ, ಜನರಲ್ - ಡಿಐಜಿಪಿ, ಜನರಲ್

ಕೆ. ಪರಶುರಾಮ: ಡಿಸಿಪಿ, ವೈಟ್‌ಫೀಲ್ಡ್ - ಡಿಐಜಿಪಿ, ಸಿಟಿಆರ್‌ಎಸ್

ಎಚ್.ಡಿ. ಆನಂದ್ ಕುಮಾರ್: ಎಸ್‌ಪಿ, ಡಿಸಿಆರ್‌ಇ - ಡಿಐಜಿಪಿ, ಸೈಬರ್ ಕಮಾಂಡ್

ಕಲಾ ಕೃಷ್ಣಸ್ವಾಮಿ: ಎಐಜಿಪಿ, ಅಪರಾಧ - ಡಿಐಜಿಪಿ, ಅಪರಾಧ

ಚಂದ್ರಕಾಂತ್ ಎಂ.ವಿ: ಡಿಸಿಪಿ, ಬೆಂಗಳೂರು ಗ್ರಾಮಾಂತರ

ಸೈದುಲು ಅದಾವತ್: ಎಸ್‌ಪಿ, ಸಿಐಡಿ - ಡಿಸಿಪಿ, ವೈಟ್‌ಫೀಲ್ಡ್, ಬೆಂಗಳೂರು

ಯತೀಶ್ ಎನ್: ಎಸ್‌ಪಿ, ರೈಲ್ವೆ - ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು

ಮಹಮ್ಮದ್ ಸುಜೀತಾ ಎಂ.ಎಸ್: ಡಿಸಿಪಿ, ಆಗ್ನೇಯ ವಿಭಾಗ, ಬೆಂಗಳೂರು

ಮಿಥುನ್ ಕುಮಾರ್: ಎಸ್‌ಪಿ, ಶಿವಮೊಗ್ಗ - ಡಿಸಿಪಿ, ಈಶಾನ್ಯ ವಿಭಾಗ, ಬೆಂಗಳೂರು

ವಿಕ್ರಮ್ ಆಮ್ಟೆ: ಎಸ್‌ಪಿ, ಚಿಕ್ಕಮಗಳೂರು - ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು

ಸಾರಾ ಫಾತಿಮಾ: ಡಿಸಿಪಿ, ಆಗ್ನೇಯ ವಿಭಾಗ - ಎಸ್‌ಪಿ, ರೈಲ್ವೇಸ್

ಡಾ.ಕವಿತಾ ಬಿ.ಟಿ: ಎಸ್‌ಪಿ, ಸಿಐಡಿ, ಬೆಂಗಳೂರು

ಸಜಿತ್: ಡಿಸಿಪಿ, ಈಶಾನ್ಯ ವಿಭಾಗ - ಎಸ್‌ಪಿ, ಐಎಸ್‌ಡಿ

ಸ್ಯಾಮ್ ವರ್ಗೀಸ್: ಎಸ್‌ಪಿ, ಸಿಐಡಿ

ಶಾಲೂ: ಎಸ್‌ಪಿ, ಸಿಐಡಿ

ಡಾ ಹರ್ಷ ಪ್ರಿಯಂವದ: ಎಸ್‌ಪಿ ಸಿಐಡಿ

ಹೀಗೆ ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಕರಿ ಮಾಡುತ್ತಲಿರುತ್ತದೆ. ಆದರೆ, ಇದೀಗ ಹೊಸ ವರ್ಷದ ಹಿಂದಿನ ದಿನ ಅಂದರೆ ಡಿಸೆಂಬರ್ 31ರಂದು ದಿಢೀರ್ ಈ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಮೂಡಿಸುವಂತಹ ವಿಚಾರವೇ ಆಗಿದೆ ಎಂದರೆ ತಪ್ಪಾಗಲಾರದು.

Read More
Next Story