LIVE Operation Sindoor | ಕದನ ವಿರಾಮ ಘೋಷಣೆ ನಂತರವೂ ಪಾಕಿಸ್ತಾನದಿಂದ  ನಿರಂತರ ಡ್ರೋನ್ ದಾಳಿ
x
ಡೊನಾಲ್ಡ್‌ ಟ್ರಂಪ್

Operation Sindoor | ಕದನ ವಿರಾಮ ಘೋಷಣೆ ನಂತರವೂ ಪಾಕಿಸ್ತಾನದಿಂದ ನಿರಂತರ ಡ್ರೋನ್ ದಾಳಿ

ಭಾರತ ಮತ್ತು ಪಾಕಿಸ್ತಾನದ ನಡುವೆ ಉಲ್ಬಣಗೊಂಡಿದ್ದ ಮಿಲಿಟರಿ ಸಂಘರ್ಷಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದೆ. ಶನಿವಾರ ಸಂಜೆ (ಮೇ 10) ಎರಡೂ ದೇಶಗಳು ಯುದ್ಧವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂಬುದಾಗಿ ವರದಿಯಾಗಿದೆ.


ಭಾರತ ಮತ್ತು ಪಾಕಿಸ್ತಾನದ ನಡುವೆ ಉಲ್ಬಣಗೊಂಡಿದ್ದ ಮಿಲಿಟರಿ ಸಂಘರ್ಷಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದೆ. ಶನಿವಾರ ಸಂಜೆ (ಮೇ 10) ಎರಡೂ ದೇಶಗಳು ಯುದ್ಧವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂಬುದಾಗಿ ವರದಿಯಾಗಿದೆ.

ಭಾರತದ ವಿದೇಶ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಈ ಕುರಿತು ಹೇಳಿದ್ದಾರೆ. ಸಂಘರ್ಷ ವಿರಾಮ ಮೇ 12ರ ಮಧ್ಯಾಹ್ನ 12 ಗಂಟೆಯಿಂದ ಜಾರಿಗೆ ಬರಲಿದೆ. ಅಲ್ಲಿಯವರೆಗೆ ಯಾವುದೇ ಸೈನಿಕ ಕಾರ್ಯಾಚರಣೆಗಳು ನಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತದ ಘೋಷಣೆಗೂ ಕೆಲವೇ ನಿಮಿಷಗಳ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರುಥ್'​ ಸಾಮಾಜಿಕ ಜಾಲತಾಣದಲ್ಲಿ, ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ದೀರ್ಘ ಚರ್ಚೆಗಳ ನಂತರ ಭಾರತ ಮತ್ತು ಪಾಕಿಸ್ತಾನ "ಪೂರ್ಣ ಮತ್ತು ತಕ್ಷಣದ ಯುದ್ಧವಿರಾಮ"ಕ್ಕೆ ಒಪ್ಪಿರುವುದಾಗಿ ಹೇಳಿಕೊಂಡಿದ್ದರು. ಈ ವೇಳೆ ಅವರು, ಎರಡೂ ದೇಶಗಳ 'ಯೋಚನೆಗಳನ್ನು' ಅಭಿನಂದಿಸಿದ್ದಾರೆ.

ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಮತ್ತು ಉಪಾಧ್ಯಕ್ಷ ಜೆ.ಡಿ. ವಾನ್ಸ್ ಅವರು ಕಳೆದ 48 ಗಂಟೆಗಳಲ್ಲಿ ಉಭಯ ದೇಶಗಳ ಉನ್ನತ ನಾಯಕರೊಂದಿಗೆ (ಪ್ರಧಾನಮಂತ್ರಿಗಳು, ವಿದೇಶಾಂಗ ಸಚಿವರು, ಸೇನಾ ಮುಖ್ಯಸ್ಥ, ರಾಷ್ಟ್ರೀಯ ಭದ್ರತಾ ಸಲಹೆಗಾರರು) ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಯುದ್ಧವಿರಾಮ ಜಾರಿಯಾದ ಬಳಿಕ ಎರಡೂ ದೇಶಗಳ ಪ್ರತಿನಿಧಿಗಳು ಚರ್ಚೆಗಳನ್ನು ನಡೆಸಲಿದ್ದಾರೆ. ಈ ಚರ್ಚೆಗಳಲ್ಲಿ ಸೇನಾ ವಾಪಸಾತಿ, ಎರಡೂ ಕಡೆಯ ಷರತ್ತುಗಳು, ಇಂಡಸ್ ವಾಟರ್ ಟ್ರೀಟಿ (IWT) ಸೇರಿದಂತೆ ವಿವಿಧ ಒಪ್ಪಂದಗಳಿಗೆ ಸಂಬಂಧಿಸಿದಂತೆ ಮೇ7ರ ಮೊದಲಿನ ಸ್ಥಿತಿಗೆ ಮರಳಲಿದೆ.ಕದನ ವಿರಾಮದ ಬಗ್ಗೆ ದ ಫೆಡರಲ್‌ ನಡೆಸಿದ ವಿಶ್ಲೇಷಣೆಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪಾಕಿಸ್ತಾನ ಹೇಳಿಕೆಭಾರತದ ಕ್ಷಿಪಣಿ ಹಾಗೂ ಡ್ರೋಣ್ ಗಳು ತನ್ನ ಮೂರು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಪಾಕಿಸ್ತಾನದ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ಶನಿವಾರ (ಮೇ 10) ಬೆಳಗಿನ ಜಾವ 4 ಗಂಟೆಗೆ ಇಸ್ಲಾಮಾಬಾದ್‌ನಲ್ಲಿ ಕರೆದ ತುರ್ತು ಮಾಧ್ಯಮಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ರಾವಲ್ಪಿಂಡಿಯ ಚಕ್ಲಾಲಾದ ನೂರ್ ಖಾನ್, ಚಕ್ವಾಲ್ ನ ಮುರಿದ್ ಹಾಗೂ ಜಾಂಗ್ ಜಿಲ್ಲೆಯ ಶೋರ್ಕೋಟ್ ಬಳಿ ಇರುವ ರಫೀಕಿ ವಾಯುನೆಲೆಗಳ ಮೇಲೆ ಭಾರತದ ಕ್ಷಿಪಣಿ ಹಾಗೂ ಡ್ರೋಣ್ ಗಳು ದಾಳಿ ನಡೆಸಿವೆ. ಭಾರತದ ದಾಳಿಯನ್ನು ಸಮರ್ಥವಾಗಿ ವಿಫಲಗೊಳಿಸಲಾಗಿದೆ. ವಾಯುನೆಲೆಗಳು ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ.

ಭಾರತದ ಕೆಟ್ಟ ಕೃತ್ಯ: ಪಾಕ್‌ ಆರೋಪ

ಭಾರತವು ತನ್ನ ಜೆಟ್‌ಗಳ ಮೂಲಕ ಕ್ಷಿಪಣಿಗಳನ್ನು ಹಾರಿಸಿರುವುದು ಕೆಟ್ಟ ಕೃತ್ಯ. ಭಾರತದ ಈ ದಾಳಿಯನ್ನು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯಿಂದ ತಡೆಹಿಡಿಯಲಾಗಿದೆ. ಭಾರತದ ಈ ಕೃತ್ಯ ಮಾರಕ ಯುದ್ಧಕ್ಕೆ ತಳ್ಳುವಂತಿದೆ. ಭಾರತದ ಈ ಆಕ್ರಮಣಕ್ಕೆ ಪಾಕಿಸ್ತಾನ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಹೇಳಿದರು.

ಭಾರತದದೊಂದಿಗಿನ ಸಂಘರ್ಷದ ಕುರಿತು ಪ್ರಶ್ನೆಗಳಿಗೆ ಚೌಧರಿ ಅವರು ಯಾವುದೇ ಉತ್ತರ ನೀಡದೇ ಮಾಧ್ಯಮಗೋಷ್ಠಿ ಮುಕ್ತಾಯಗೊಳಿಸಿ ಹೊರ ನಡೆದರು.

ವಾಯುಪ್ರದೇಶ ಸ್ಥಗಿತ

ಎಲ್ಲಾ ರೀತಿಯ ವಿಮಾನ ಪ್ರಯಾಣಗಳಿಗೆ ತನ್ನ ವಾಯುಪ್ರದೇಶವನ್ನು ಪಾಕಿಸ್ತಾನ ಸ್ಥಗಿತಗೊಳಿಸಿದೆ. ಈ ಕುರಿತು ಪಾಕಿಸ್ತಾನ ಏರ್‌ಪೋರ್ಟ್ ಅಥಾರಿಟಿ (ಪಿಎಎ) ಅಧಿಸೂಚನೆ ಹೊರಡಿಸಿದ್ದು, ವಾಯುಪ್ರದೇಶವನ್ನು ಶನಿವಾರ (ಮೇ 10) ಮುಂಜಾನೆ 3.15 ರಿಂದ ಮಧ್ಯಾಹ್ನ 12 ರವರೆಗೆ ಮುಚ್ಚಲಾಗಿದೆ ಎಂದು ತಿಳಿಸಿದೆ. ಮಧ್ಯಾಹ್ನ 12 ರ ಬಳಿಕ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ಪಿಎಎ ಹೇಳಿದೆ.

ಏಪ್ರಿಲ್ 22 ರ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತದ ಸೇನಾ ಪಡೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) 9 ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತ್ತು. ಇದಾದ ಬಳಿಕ ಪಾಕಿಸ್ತಾನವು ಭಾರತದ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ಮಧ್ಯೆ ಉದ್ವಿಗ್ನತೆ ಹೆಚ್ಚಾಗಿದೆ.

ಮುಂದುವರಿದ ಡ್ರೋಣ್ ದಾಳಿ

ಜಮ್ಮು ಕಾಶ್ಮೀರದಿಂದ ಗುಜರಾತ್‌ವರೆಗಿನ ಭಾರತದ 26 ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸತತ ಎರಡನೇ ದಿನವಾದ ಶುಕ್ರವಾರ ರಾತ್ರಿ ಕೂಡ ಡ್ರೋಣ್ ದಾಳಿ ನಡೆಸಿತು. ವಿಮಾನ ನಿಲ್ದಾಣ ಮತ್ತು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ದಾಳಿಯನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆ ವಿಫಲಗೊಳಿಸಿತು ಎಂದು ರಕ್ಷಣಾ ಸಚಿವಾಲಯ ಹೇಳಿದೆ.

Live Updates

  • 10 May 2025 10:31 AM IST

    ಗುಜರಾತ್: ಕಚ್ ನಿವಾಸಿಗಳು ಮನೆಯೊಳಗೆ ಇರುವಂತೆ ಸೂಚನೆ

    ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಾಗರಿಕರು ಮನೆಯೊಳಗೆ ಇರುವಂತೆ ಮತ್ತು ಅನಗತ್ಯವಾಗಿ ಹೊರಗೆ ಹೋಗದಂತೆ ಗುಜರಾತ್‌ನ ಕಚ್ ಆಡಳಿತವು ಶನಿವಾರ ಎಚ್ಚರಿಕೆ ನೀಡಿದೆ. 

    ಭಾರತೀಯ ಸಶಸ್ತ್ರ ಪಡೆಗಳು ಶುಕ್ರವಾರ (ಮೇ 9) ರಾತ್ರಿ ಕಚ್‌ನಲ್ಲಿ ಪಾಕಿಸ್ತಾನದಿಂದ ಬಂದ ಡ್ರೋನ್‌ಗಳನ್ನು ಹೊಡೆದುರುಳಿಸಿದ್ದವು. ಬಳಿಕ ಕಚ್ ಮತ್ತು ಗುಜರಾತ್‌ನ ಇತರ ಎರಡು ಜಿಲ್ಲೆಗಳಲ್ಲಿ ವಿದ್ಯುತ್ ಕಡಿತಗೊಳಿಸಿದ್ದವು. 

    "ಎಲ್ಲಾ ನಾಗರಿಕರು ಮನೆಯೊಳಗೆ ಸುರಕ್ಷಿತವಾಗಿರಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗಬೇಡಿ ಮತ್ತು ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ. ಭಯಪಡಬೇಡಿ" ಎಂದು ಕಚ್ ಕಲೆಕ್ಟರ್ ಶನಿವಾರ ಬೆಳಿಗ್ಗೆ ಆಡಳಿತದ ಅಧಿಕೃತ  'ಎಕ್ಸ್' ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    ಜಿಲ್ಲಾ ಪ್ರಧಾನ ಕಚೇರಿ ಭುಜ್ ಅಂತರರಾಷ್ಟ್ರೀಯ ಗಡಿಗಳು ಮತ್ತು ಪಾಕಿಸ್ತಾನದೊಂದಿಗಿನ ನಿಯಂತ್ರಣ ರೇಖೆಯ ಉದ್ದಕ್ಕೂ ಡ್ರೋನ್‌ಗಳು ಕಂಡುಬಂದ 26 ಸ್ಥಳಗಳಲ್ಲಿ ಒಂದಾಗಿದೆ ಎಂದು ಸೇನೆ ಶುಕ್ರವಾರ ತಿಳಿಸಿದೆ.

    ಕಚ್ ಜಿಲ್ಲೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದ್ದು, ಭಾರತ-ಪಾಕ್ ಗಡಿಗೆ ಹತ್ತಿರವಿರುವ ಬನಸ್ಕಾಂತ ಮತ್ತು ಪಠಾಣ್ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿದೆ. ಪಠಾಣ್‌ನ ಸಂತಲ್‌ಪುರ ತಾಲೂಕಿನ ಗಡಿಯಲ್ಲಿರುವ ಕೆಲವು ಹಳ್ಳಿಗಳು ಸಹ ವಿದ್ಯುತ್ ಕಡಿತಗೊಂಡಿವೆ ಎಂದು ಹೇಳಲಾಗಿದೆ.

    ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಶುಕ್ರವಾರ ಸಶಸ್ತ್ರ ಪಡೆಗಳ ಅಧಿಕಾರಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದರು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಇಲಾಖೆಗಳು ಮತ್ತು ಸಶಸ್ತ್ರ ಮತ್ತು ಅರೆಸೈನಿಕ ಪಡೆಗಳ ನಡುವೆ ಉತ್ತಮ ಸಮನ್ವಯವನ್ನು ಸ್ಥಾಪಿಸುವ ಗುರಿಯನ್ನು ಈ ಸಭೆ ಹೊಂದಿದೆ ಎಂದು ಶುಕ್ರವಾರ ಗಾಂಧಿನಗರದಲ್ಲಿ ನಡೆದ ಸಂವಾದದ ನಂತರ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಹೇಳಿದರು.

  • 10 May 2025 10:23 AM IST

    ದೆಹಲಿ ವಿಮಾನ ನಿಲ್ದಾಣದ ಪ್ರಕಟನೆ

    ದೆಹಲಿ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಪ್ರಸ್ತುತ ಸಾಮಾನ್ಯವಾಗಿದ್ದರೂ, ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ಮಧ್ಯೆ ವಾಯುಪ್ರದೇಶದ ಪರಿಸ್ಥಿತಿಗಳು ಬದಲಾಗುತ್ತಿರುವುದರಿಂದ ಕೆಲವು ವಿಮಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎರಡು ರಾಷ್ಟ್ರಗಳ ನಡುವಿನ ಮಿಲಿಟರಿ ಸಂಘರ್ಷ ತೀವ್ರಗೊಂಡಂತೆ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ.

    ರಾಷ್ಟ್ರ ರಾಜಧಾನಿಯಲ್ಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (IGIA) ನಿರ್ವಹಿಸುವ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (DIAL), ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳು ಪ್ರಸ್ತುತ ಸಾಮಾನ್ಯವಾಗಿವೆ. ಆದರೂ, ವಾಯುಪ್ರದೇಶದ ಪರಿಸ್ಥಿತಿಗಳು ಮತ್ತು ಕೆಲವೊಂದು ಭದ್ರತಾ ಕ್ರಮಗಳಿಂದಾಗಿ, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋದ ಆದೇಶಗಳ ಪ್ರಕಾರ, ಕೆಲವು ವಿಮಾನ ವೇಳಾಪಟ್ಟಿಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಭದ್ರತಾ ಚೆಕ್‌ಪಾಯಿಂಟ್ ಪ್ರಕ್ರಿಯೆಯ ಸಮಯವು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ತನ್ನ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ. 

    ಭದ್ರತಾ ತಪಾಸಣೆಗಳಲ್ಲಿ ಸಂಭವನೀಯ ವಿಳಂಬವನ್ನು ನಿಭಾಯಿಸಲು ಪ್ರಯಾಣಿಕರು ಬೇಗನೆ ಬರುವಂತೆ ಸೂಚಿಸಲಾಗಿದೆ. ಸುಗಮ ಸೌಲಭ್ಯಕ್ಕಾಗಿ ವಿಮಾನಯಾನ ಸಂಸ್ಥೆ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಮನವಿ ಮಾಡಿದೆ.  ಶುಕ್ರವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಹೊರಡುವ 138 ವಿಮಾನಗಳನ್ನು ವಿವಿಧ ವಿಮಾನಯಾನ ಸಂಸ್ಥೆಗಳು ರದ್ದುಗೊಳಿಸಿವೆ.

  • 10 May 2025 9:50 AM IST

    ವೈಜ್ಞಾನಿಕ, ತಾಂತ್ರಿಕ ಸ್ಥಾವರಗಳ ಭದ್ರತೆ ಪರಿಶೀಲಿಸಿದ ಸಚಿವ ಜಿತೇಂದ್ರ ಸಿಂಗ್

    ದೇಶಾದ್ಯಂತ ವೈಜ್ಞಾನಿಕ ಮತ್ತು ತಾಂತ್ರಿಕ ಸ್ಥಾವರಗಳ ಭದ್ರತೆಗೆ ಸಂಬಂಧಿಸಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಹಿರಿಯ ಅಧಿಕಾರಿಗಳು ಮತ್ತು ವಿವಿಧ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು.

    ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಸಂಘರ್ಷ ತಾರಕಕ್ಕೇರಿರುವ ಕಾರಣ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಬೇಕು. ಸಂಭವನೀಯ ದಾಳಿ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಚರ್ಚೆ ನಡೆಸಿದ್ದಾರೆ.

  • 10 May 2025 9:42 AM IST

    ಭಾರತದ S-400 ವಾಯು ರಕ್ಷಣಾ ವ್ಯವಸ್ಥೆಯ ನಾಶದ ಹೇಳಿಕೆ ಸುಳ್ಳು ಎಂದು ಭಾರತ ಹೇಳಿದೆ

    JF-17 ಯುದ್ಧ ವಿಮಾನಗಳಿಂದ ಹಾರಿಸಲಾದ ಹೈಪರ್‌ಸಾನಿಕ್ ಕ್ಷಿಪಣಿಗಳು ಆಡಂಪುರದಲ್ಲಿ ಭಾರತದ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿವೆ ಎಂಬ ಪಾಕಿಸ್ತಾನದ ಹೇಳಿಕೆ "ಸುಳ್ಳು" ಎಂದು ಭಾರತೀಯ ಮಿಲಿಟರಿ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

    ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ PTV ಈ ಹಿಂದೆ ಪಾಕಿಸ್ತಾನ ವಾಯುಪಡೆಯ ಹೈಪರ್‌ಸಾನಿಕ್ ಕ್ಷಿಪಣಿಗಳು ಆಡಂಪುರದಲ್ಲಿ S-400 ವ್ಯವಸ್ಥೆಯನ್ನು ನಾಶಪಡಿಸಿವೆ ಎಂದು ವರದಿ ಮಾಡಿತ್ತು.

    ಪಾಕಿಸ್ತಾನದ JF-17 ಥಂಡರ್ ಜೆಟ್ ಭಾರತದ ಪಂಜಾಬ್‌ನಲ್ಲಿ ಭಾರತದ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದೆ ಎಂದು ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆ ಕೂಡ ಹೇಳಿದೆ ಎಂದು ಚೀನಾದ ಸುದ್ದಿ ಸಂಸ್ಥೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

    ಈ ವರದಿಗಳು ಸುಳ್ಳು ಎಂದು ಭಾರತೀಯ ವಾಯುಪಡೆಯ ವಕ್ತಾರರು ತಿಳಿಸಿದ್ದಾರೆ.

  • 10 May 2025 9:33 AM IST

    ಹರಿಯಾಣದಲ್ಲಿ ಕ್ಷಿಪಣಿ ಅವಶೇಷಗಳು?



  • 10 May 2025 9:33 AM IST

    ಗುಜರಾತ್: ಗಡಿ ಪ್ರದೇಶಗಳಿಗೆ ಧಾವಿಸಿದ ವೈದ್ಯರು

    ಗುಜರಾತ್ ಆರೋಗ್ಯ ಇಲಾಖೆಯು ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ 154 ವೈದ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಸೂಚನೆ ಬರುವವರೆಗೆ ಗಡಿ ಜಿಲ್ಲೆಗಳಿಗೆ ವರ್ಗಾಯಿಸಿದೆ. ಈ ಜಿಲ್ಲೆಗಳಲ್ಲಿ ಜಾಮ್‌ನಗರ, ಪೋರಬಂದರ್, ದೇವಭೂಮಿ ದ್ವಾರಕ, ಬನಸ್ಕಾಂತ, ಪಠಾಣ್ ಮತ್ತು ಕಚ್ ಸೇರಿವೆ.

  • 10 May 2025 9:30 AM IST

    ಜಲಂಧರ್‌ನಲ್ಲಿ ಭೀತಿ

    ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ಮಧ್ಯೆ ಶನಿವಾರ ಮುಂಜಾನೆ ಪಂಜಾಬ್‌ನ ಜಲಂಧರ್ ಜಿಲ್ಲೆಯ ಕಂಗನಿವಾಲ್ ಗ್ರಾಮದ ವಸತಿ ಪ್ರದೇಶದಲ್ಲಿ ಕ್ಷಿಪಣಿ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಘಟನೆಯಲ್ಲಿ ವಲಸೆ ಕಾರ್ಮಿಕನೊಬ್ಬ ಗಾಯಗೊಂಡಿದ್ದಾನೆ ಎಂದು ಸ್ಥಳೀಯ ನಿವಾಸಿಗಳು ಹೇಳಿದರೆ, ಆ ಪ್ರದೇಶದಲ್ಲಿ ಕೆಲವು ಮನೆಗಳಿಗೂ ಹಾನಿಯಾಗಿದೆ.

    "ನಾನು ಕಿಟಕಿಯ ಬಳಿ ನಿಂತಿದ್ದಾಗ ಬೆಳಗಿನ ಜಾವ 1.30 ರ ಸುಮಾರಿಗೆ ಯಾವುದೋ ವಸ್ತು ನೀರಿನ ಟ್ಯಾಂಕ್‌ಗೆ (ಮನೆಯ) ಡಿಕ್ಕಿ ಹೊಡೆದು, ಇಳಿಯುವ ಮೊದಲು 4-5 ಮನೆಗಳ ಗಾಜುಗಳು ಒಡೆದವು" ಎಂದು ಪ್ರದೇಶದ ಮಹಿಳೆಯೊಬ್ಬರು ಹೇಳಿದರು.

    ಗಾಯಗೊಂಡ ಕಾರ್ಮಿಕನ್ನು  ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದರು.

    "ನಮ್ಮ ಮನೆಯ ನೀರಿನ ಟ್ಯಾಂಕ್ ಹಾನಿಗೊಳಗಾಗಿದೆ, ಅನೇಕ ಕಿಟಕಿ ಗಾಜುಗಳು ಒಡೆದುಹೋಗಿವೆ. ಸುತ್ತಲೂ ಹೊಗೆ ಇತ್ತು" ಎಂದು ಸ್ಥಳೀಯ ನಿವಾಸಿ ಮುಸ್ಕಾನ್ ಕೂಡ ಹೇಳಿದ್ದಾರೆ. ರಾತ್ರಿಯಲ್ಲಿ ದೊಡ್ಡ ಸ್ಫೋಟ ಸಂಭವಿಸಿದ್ದು, ಹಲವಾರು ಜನರು ತಮ್ಮ ಮನೆಗಳಿಂದ ಹೊರಬರಬೇಕಾಯಿತು.

    "ಒಂದು ಕಾರು ಹಾನಿಗೊಳಗಾಗಿದೆ... ನಾವೆಲ್ಲರೂ ಭಯಭೀತರಾಗಿದ್ದೇವೆ" ಎಂದು ಅವರು ಹೇಳಿದರು.

    ತನ್ನ ಅನುಭವವನ್ನು ಹಂಚಿಕೊಳ್ಳುತ್ತಾ, ಸುರ್ಜಿತ್ ಕೌರ್, ಆಕಾಶದಲ್ಲಿ ಕೆಂಪು ಬಣ್ಣದ ಬೆಳಕು ಮಿನುಗಿತು ಮತ್ತು ನಂತರ ದೊಡ್ಡ ಸ್ಫೋಟ ಸಂಭವಿಸಿತು ಎಂದು ಹೇಳಿದರು.

  • 26 ಭಾರತೀಯ ಸ್ಥಳಗಳಲ್ಲಿ ಡ್ರೋನ್‌ ದಾಳಿ
    10 May 2025 9:30 AM IST

    26 ಭಾರತೀಯ ಸ್ಥಳಗಳಲ್ಲಿ ಡ್ರೋನ್‌ ದಾಳಿ

    ಭಾರತದೊಂದಿಗಿನ ಸೇನಾ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದ ಪಾಕಿಸ್ತಾನ ಸೇನೆಯು, ಎರಡನೇ ರಾತ್ರಿಯೂ ಭಾರತದ ಪಶ್ಚಿಮ ಗಡಿಯುದ್ದಕ್ಕೂ ವ್ಯಾಪಕ ದಾಳಿಯನ್ನು ನಡೆಸಿತು. ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನದ ಅಂತರರಾಷ್ಟ್ರೀಯ ಗಡಿ ಮತ್ತು ಗಡಿರೇಖೆ (LoC) ಯದ್ದಕ್ಕೂ ಡ್ರೋನ್ ದಾಳಿ ಮತ್ತು ಭಾರೀ ಫಿರಂಗಿ ದಾಳಿಗಳು ನಡೆದಿವೆ. ಒಟ್ಟು 26 ಭಾರತೀಯ ಸ್ಥಳಗಳಲ್ಲಿ ಡ್ರೋನ್‌ಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.

    ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಿಂದ ಗುಜರಾತಿನ ಭುಜ್‌ವರೆಗಿನ ವಿಶಾಲ ವ್ಯಾಪ್ತಿಯಲ್ಲಿ ಈ ದಾಳಿಗಳು ನಡೆದಿವೆ. ವರದಿಯಾದ 26 ಸ್ಥಳಗಳಲ್ಲಿ ಕಂಡುಬಂದ ಡ್ರೋನ್‌ಗಳಲ್ಲಿ ಕೆಲವು ಸಶಸ್ತ್ರವಾಗಿದ್ದು, ಸೈನಿಕ ನೆಲೆಗಳು ಮತ್ತು ನಾಗರಿಕ ಪ್ರದೇಶಗಳಿಗೆ ಸಂಭಾವ್ಯ ಅಪಾಯವನ್ನುಂಟುಮಾಡಿದ್ದವು. ದಾಳಿಯ ಯತ್ನದಲ್ಲಿ 300-400 ಡ್ರೋನ್‌ಗಳು ಮತ್ತು ಇತರ ಹಾರುವ ಸಾಧನಗಳನ್ನು ಬಳಸಲಾಗಿದೆ ಎಂದು ಭಾರತ ತಿಳಿಸಿದೆ. ಇದು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪರೀಕ್ಷಿಸುವ ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸುವ ಉದ್ದೇಶವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

  • 10 May 2025 9:25 AM IST

    ಗಡಿ ಭಾಗದ ಜಿಲ್ಲೆಗಳಿಗೆ ವೈದ್ಯರ ವರ್ಗಾವಣೆ

    ಗುಜರಾತ್ ಸರ್ಕಾರ 154 ಮಂದಿ ವೈದ್ಯರನ್ನು ಗಡಿ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದೆ. ಜಾಮ್ ನಗರ, ಪೋರಬಂದರ್, ದೇವಭೂಮಿ, ದ್ವಾರಕ, ಬನಸ್ಕಾಂತ ಪಠಾಣ್ ಹಾಗೂ ಕುಚ್ ಪ್ರದೇಶದ ಸರ್ಕಾರಿ ಆಸ್ಪತ್ರೆ ಗಳಿಗೆ ವರ್ಗಾವಣೆ ಮಾಡಲಾಗಿದೆ.

Read More
Next Story