I also know the art of conspiracy; I will use it when the time comes: Rajanna
x

ಕೆ.ಎನ್‌. ರಾಜಣ್ಣ

ಅರಸು, ಮೊಯ್ಲಿ ಎದುರು ನಾನೇನು ದೊಡ್ಡವನಲ್ಲ": ಸಚಿವ ಸ್ಥಾನ ಕಳೆದುಕೊಂಡ ಬಗ್ಗೆ ಕೆ.ಎನ್. ರಾಜಣ್ಣ ಭಾವುಕ ನುಡಿ

ಇತ್ತೀಚೆಗೆ ಸಚಿವ ಸ್ಥಾನವನ್ನು ಕಳೆದುಕೊಂಡಿರುವ ಹಿರಿಯ ನಾಯಕ ಕೆ.ಎನ್. ರಾಜಣ್ಣ, ತಮ್ಮ ಅಧಿಕಾರ ನಷ್ಟದ ಬಗ್ಗೆ ಮೌನ ಮುರಿದಿದ್ದಾರೆ.


ಇತ್ತೀಚೆಗೆ ಸಚಿವ ಸ್ಥಾನವನ್ನು ಕಳೆದುಕೊಂಡಿರುವ ಹಿರಿಯ ನಾಯಕ ಕೆ.ಎನ್. ರಾಜಣ್ಣ, ತಮ್ಮ ಅಧಿಕಾರ ನಷ್ಟದ ಬಗ್ಗೆ ಮೌನ ಮುರಿದಿದ್ದು, ರಾಜ್ಯ ಕಂಡ ಇಬ್ಬರು ಮಹಾನ್ ನಾಯಕರನ್ನು ಉಲ್ಲೇಖಿಸಿ ಭಾವುಕವಾಗಿ ಮಾತನಾಡಿದ್ದಾರೆ.

ಪಟ್ಟಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಬಡವರ ಪರ ಆಡಳಿತ ನೀಡಿದ ದೇವರಾಜ ಅರಸು ಮತ್ತು ಬಡವರ ಮಕ್ಕಳಿಗೆ ಅನುಕೂಲವಾಗಲೆಂದು ಸಿಇಟಿ ಜಾರಿಗೆ ತಂದ ವೀರಪ್ಪ ಮೊಯ್ಲಿ ಅವರಂತಹ ಮಹಾನ್ ನಾಯಕರನ್ನೇ ಅಧಿಕಾರದಿಂದ ಕೆಳಗೆ ಇಳಿಸಲಾಗಿದೆ. ಅವರ ಮುಂದೆ ನನ್ನ ಅಧಿಕಾರ ದೊಡ್ಡದಲ್ಲ" ಎಂದು ಹೇಳುವ ಮೂಲಕ ತಮ್ಮನ್ನು ಸಮಾಧಾನಪಡಿಸಿಕೊಂಡರು.

"ನನ್ನ ಸಚಿವ ಸ್ಥಾನ ಹೋಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೂಷಿಸುವುದು ಸರಿಯಲ್ಲ. ಅಧಿಕಾರ ಕಳೆದುಕೊಳ್ಳಲು ಹಲವು ಕಾರಣಗಳಿವೆ, ಅವುಗಳನ್ನು ಸಮಯ ಬಂದಾಗ ಬಹಿರಂಗಪಡಿಸುತ್ತೇನೆ" ಎಂದು ಅವರು ನಿಗೂಢವಾಗಿ ನುಡಿದರು. ಈ ಮೂಲಕ ತಮ್ಮ ಪದಚ್ಯುತಿಯ ಹಿಂದೆ ಬೇರೆಯೇ ರಾಜಕೀಯ ಲೆಕ್ಕಾಚಾರಗಳಿವೆ ಎಂಬ ಸುಳಿವನ್ನು ನೀಡಿದರು.

Read More
Next Story