Horrific tragedy in Bengaluru: Toddler killed due to car driver’s negligence
x

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಘೋರ ದುರಂತ: ಕಾರು ಚಾಲಕನ ಅಜಾಗರೂಕತೆಗೆ ಬಲಿಯಾದ ಕಂದಮ್ಮ

ಮೃತಪಟ್ಟ ಮಗುವನ್ನು ಮಹಮ್ಮದ್ ಉಮರ್ ಫಾರೂಕ್ (ಒಂದೂವರೆ ವರ್ಷ) ಎಂದು ಗುರುತಿಸಲಾಗಿದೆ. ಮನೆಯ ಮಾಲೀಕರಾದ ಸ್ವಾಮಿ ಎಂಬುವವರು ತಮ್ಮ ಕಾರನ್ನು ಮನೆಯಿಂದ ಹೊರತೆಗೆಯುವಾಗ ಈ ದುರ್ಘಟನೆ ಸಂಭವಿಸಿದೆ.


Click the Play button to hear this message in audio format

ರಾಜಧಾನಿಯಲ್ಲಿ ಮತ್ತೊಂದು ದಾರುಣ ಘಟನೆ ಸಂಭವಿಸಿದೆ. ಮನೆ ಮಾಲೀಕರು ಕಾರು ರಿವರ್ಸ್ ತೆಗೆಯುತ್ತಿದ್ದಾಗ, ಅದರ ಅಡಿಗೆ ಸಿಲುಕಿ ಒಂದುವರೆ ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಈ ಹೃದಯವಿದ್ರಾವಕ ಘಟನೆ ಮಾಗಡಿ ರಸ್ತೆ ಬಳಿ ನಡೆದಿದೆ.

ಮೃತಪಟ್ಟ ಮಗುವನ್ನು ಮಹಮ್ಮದ್ ಉಮರ್ ಫಾರೂಕ್ (ಒಂದೂವರೆ ವರ್ಷ) ಎಂದು ಗುರುತಿಸಲಾಗಿದೆ. ಮನೆಯ ಮಾಲೀಕರಾದ ಸ್ವಾಮಿ ಎಂಬುವವರು ತಮ್ಮ ಕಾರನ್ನು ಮನೆಯಿಂದ ಹೊರತೆಗೆಯುವಾಗ ಈ ದುರ್ಘಟನೆ ಸಂಭವಿಸಿದೆ.

ಕುಣಿಗಲ್ ಮೂಲದ ಕುಟುಂಬವೊಂದು ಸ್ವಾಮಿ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿತ್ತು. ಅವರ ಸಂಬಂಧಿಕರು ತಮ್ಮ ಮಗು ಮಹಮ್ಮದ್‌ನೊಂದಿಗೆ ಇವರ ಮನೆಗೆ ಬಂದಿದ್ದರು. ಮನೆಯ ಹೊರಗೆ ಮಗು ಆಟವಾಡುತ್ತಿದ್ದಾಗ, ಸ್ವಾಮಿ ಅವರು ಕಾರನ್ನು ರಿವರ್ಸ್ ತೆಗೆದಿದ್ದಾರೆ. ಈ ವೇಳೆ ಕಾರಿನ ಕೆಳಗೆ ಮಗು ಇದ್ದದ್ದು ಅವರ ಗಮನಕ್ಕೆ ಬಂದಿಲ್ಲ. ಪರಿಣಾಮವಾಗಿ, ಕಾರು ಮಗುವಿನ ಮೇಲೆ ಹರಿದು ಅದು ಮೃತಪಟ್ಟಿದೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More
Next Story