
ಹೆಚ್ ಡಿ ಕುಮಾರಸ್ವಾಮಿ
ಬಿಜೆಪಿ-ಜೆಡಿಎಸ್ ಮೈತ್ರಿ ಗಟ್ಟಿಯಾಗಿದೆ: "ಅಸೂಯೆ" ಆರೋಪಕ್ಕೆ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು
ಕೇಂದ್ರ ಸಚಿವರಾಗಿ ತಮಗೆ ದೊರೆತಿರುವ ಮಹತ್ವದ ಜವಾಬ್ದಾರಿಗಳನ್ನು ಪ್ರಸ್ತಾಪಿಸುವ ಮೂಲಕ, ತಾವು ಯಾವುದೇ ಅಸೂಯೆಯಿಂದ ಮಾತನಾಡುತ್ತಿಲ್ಲ, ಬದಲಿಗೆ ಅಧಿಕಾರಯುತ ಸ್ಥಾನದಿಂದ ಮಾತನಾಡುತ್ತಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಬಂಧ ಗಟ್ಟಿಯಾಗಿದ್ದು, ಇನ್ನೂ ಆ ಬಂಧ ಮುಂದುವರಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿರುವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಆರ್ಸಿಬಿ ವಿಯೋತ್ಸವ ಏರ್ಪಿಡಿಸಿದ ಬಳಿಕ ನಡೆದ ಕಾಲ್ತುಳಿದಲ್ಲಿ 11 ಮಂದಿ ಸಾವಿಗೀಡಾದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಸೇರಿದಂತೆ ಅಧಿಕಾರಿಗಳ ಅಮಾನತು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ತಮ್ಮ ಹೇಳಿಕೆಗಳನ್ನು "ಅಸೂಯೆ" ಎಂದು ಕರೆದ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದು, ತಮ್ಮ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
"ಬಿಜೆಪಿ -ಜೆಡಿಎಸ್ ಮೈತ್ರಿ ಗಟ್ಟಿಯಾಗಿದೆ. ನಮ್ಮನ್ನು ಬೇರೆ ಮಾಡಲು ಆಗಲ್ಲ" ಎಂದು ಕುಮಾರಸ್ವಾಮಿ ದೃಢವಾಗಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಉತ್ತಮ ಸಾಧನೆ ಮಾಡಿವೆ," ಎಂದ ಅವರು, ಮೈತ್ರಿ ಮುಂದುವರಿಸಿಕೊಂಡು ಹೋಗುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಈ ಮೈತ್ರಿಯನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.
ಅಸೂಯೆ ಆರೋಪಕ್ಕೆ ತಿರುಗೇಟು ಮತ್ತು ಅಧಿಕಾರದ ಪ್ರಸ್ತಾಪ
"ನಾನು ಅಸೂಯೆಯಿಂದ ಮಾತನಾಡುತ್ತೇನೆ ಅಂತಾ ಕಾಂಗ್ರೆಸ್ನವರು ಹೇಳುತ್ತಾರೆ" ಎಂದು ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ನರೇಂದ್ರ ಮೋದಿ ಅವರು ನನಗೆ ಎರಡು ದೊಡ್ಡ ಖಾತೆ ನೀಡಿದ್ದಾರೆ. ಕೇಂದ್ರ ಸಚಿವರಾಗಿ ತಮಗೆ ದೊರೆತಿರುವ ಮಹತ್ವದ ಜವಾಬ್ದಾರಿಗಳನ್ನು ಪ್ರಸ್ತಾಪಿಸುವ ಮೂಲಕ, ತಾವು ಯಾವುದೇ ಅಸೂಯೆಯಿಂದ ಮಾತನಾಡುತ್ತಿಲ್ಲ, ಬದಲಿಗೆ ಅಧಿಕಾರಯುತ ಸ್ಥಾನದಿಂದ ಮಾತನಾಡುತ್ತಿದ್ದೇನೆಮ" ಎಂದು ಸ್ಪಷ್ಟಪಡಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳ ವಿವರಣೆ
ತಮ್ಮ ಇಲಾಖೆಯ ಕೆಲಸಗಳ ಕುರಿತು ಮಾತನಾಡಿದ ಕುಮಾರಸ್ವಾಮಿ, "ಎಚ್ಎಂಟಿ ಪುನಶ್ಚೇತನ ಮಾಡುತ್ತೇನೆ, ಶಿವಮೊಗ್ಗದ ವಿಐಎಸ್ಎಲ್ಗೂ ಡಿಪಿಆರ್ ಸಿದ್ಧಮಾಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.