ರಾಜ್ಯಪಾಲರಿಗೆ ಕಪ್ಪು ಬಟ್ಟೆ ಆತಂಕ: ವಿವಿ ಘಟಿಕೋತ್ಸವಕ್ಕೆ ಬಿಗಿ ಭದ್ರತೆ
x

ರಾಜ್ಯಪಾಲರಿಗೆ ಕಪ್ಪು ಬಟ್ಟೆ ಆತಂಕ: ವಿವಿ ಘಟಿಕೋತ್ಸವಕ್ಕೆ ಬಿಗಿ ಭದ್ರತೆ


ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್‌ ಚಂದ್ ಗೆಹಲೋತ್ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸುವ ಭೀತಿ ಎದುರಾಗಿದೆ. ಹಾಗಾಗಿ ಸೋಮವಾರ ರಾಜ್ಯಪಾಲರು ಭಾಗವಹಿಸಿರುವ ಕಲಬುರಗಿ ವಿ.ವಿ. ಘಟಿಕೋತ್ಸವಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು.

ವಿ.ವಿ. ಘಟಿಕೋತ್ಸವಕ್ಕೆ ಆಗಮಿಸಿರುವ ರಾಜ್ಯಪಾಲರಿಗೆ ಭದ್ರತೆ ಒದಗಿಸಲು ಸ್ವತಃ ಈಶಾನ್ಯ ವಲಯ ಐಜಿಪಿ, ಪ್ರಭಾರ ಪೊಲೀಸ್ ಕಮಿಷನರ್ ಅಜಯ್ ಹಿಲೋರಿ ಅವರು ಉಸ್ತುವಾರಿ ವಹಿಸಿಕೊಂಡಿದ್ದರು. ಎಸ್ಪಿ ಅತ್ತೂರು ಶ್ರೀನಿವಾಸಲು, ಡಿವೈಎಸ್ಪಿಗಳು, ಎಸಿಪಿಗಳು ವಿವಿಧ ಠಾಣೆಗಳ ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ 42ನೇ ವಿ.ವಿ. ಘಟಿಕೋತ್ಸವಕ್ಕೆ ಆಹ್ವಾನ ಪತ್ರ ಹಾಗೂ ಗುರುತಿನ ಚೀಟಿ ಪರಿಶೀಲಿಸಿ ಒಳಗಡೆ ಬಿಡಲಾಯಿತು. ಸಭಾಂಗಣದ ಒಳಗಡೆಯೂ ಪೊಲೀಸರು ನಿಂತಿದ್ದು, ಕಪ್ಪು ಕರವಸ್ತ್ರ, ಶರ್ಟ್ ಧರಿಸಿದವರನ್ನು ಒಳಗೆ ಬಿಡಲಿಲ್ಲ. ವಿ.ವಿ.ಯ ಎರಡನೇ ಗೇಟ್ ಹಾಗೂ ಹಿಂಭಾಗದ ಗೇಟ್ ಬಂದ್ ಮಾಡಿದ್ದರಿಂದ ಘಟಿಕೋತ್ಸವಕ್ಕೆ ಬರುತ್ತಿದ್ದ ವಿದ್ಯಾರ್ಥಿಗಳು, ಪೋಷಕರು, ಪ್ರಾಧ್ಯಾಪಕರು ಪರದಾಡಿದರು.

Read More
Next Story