ಲಂಚ ಕೊಟ್ಟು ಕೆಲಸಕ್ಕೆ ಸೇರಿದವ ʼಬಿಟ್ಟಿ ಬಂದಿಲ್ಲʼ ಎನ್ನದಿರುವನೇ? ಜ. ಸಂತೋಷ್ ಹೆಗ್ಡೆ ಪ್ರಶ್ನೆ
x

ಲಂಚ ಕೊಟ್ಟು ಕೆಲಸಕ್ಕೆ ಸೇರಿದವ ʼಬಿಟ್ಟಿ ಬಂದಿಲ್ಲʼ ಎನ್ನದಿರುವನೇ? ಜ. ಸಂತೋಷ್ ಹೆಗ್ಡೆ ಪ್ರಶ್ನೆ

ಜಯನಗರ ನ್ಯಾಷನಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.


ಮಾನವೀಯತೆ ಇರುವವರು ಮಾತ್ರ ಮನುಷ್ಯರಾಗಲು ಸಾಧ್ಯ. ಉಳಿದವರು ಕೇವಲ ಹೋಮೋಸೇಪಿಯನ್ಸ್ ಅಷ್ಟೆ. ಪ್ರಾಮಾಣಿಕತೆ, ಮಾನವೀಯತೆ ಮೊದಲು ನಾವೆಲ್ಲರೂ ರೂಢಿಸಿಕೊಳ್ಳಬೇಕು ” ಎಂದು ಜಸ್ಟೀಸ್ ಸಂತೋಷ್ ಹೆಗ್ಡೆ ಕರೆ ನೀಡಿದರು.

ಜಯನಗರ ನ್ಯಾಷನಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.

“ರಾಜಕೀಯ ಸೇವೆಯಾಗಬೇಕೆ ಹೊರತು, ವೃತ್ತಿಯಾಗಬಾರದು. ಲಂಚ ಕೊಟ್ಟು ಕೆಲಸಕ್ಕೆ ಸೇರಿದವ, ಮುಂದೆ ನಾನು ಕೊಟ್ಟು ಬಂದಿದ್ದೀನಿ, ಬಿಟ್ಟಿ ಬಂದಿಲ್ಲ ಅಂತ ಹೇಳದೇ ಇರುತ್ತಾನಾ? ದುಡ್ಡಿನಲ್ಲಿ ಮಿಲಿಯನೇರ್ ಆಗೋದು ಸಾಧನೆಯಲ್ಲ, ದುರಾಸೆ ಬಿಟ್ಟು ಸಾಮಾಜಿಕ ಮೌಲ್ಯಗಳಲ್ಲಿ ಶ್ರೀಮಂತರಾಗಬೇಕು” ಎಂದರು.

“ಶಾಸಕಾಂಗ, ಕಾರ್ಯಾಂಗ,ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟರದ್ದೇ ಸಿಂಹಪಾಲು. ಯಾರೊಬ್ಬರೂ ದೂರು ನೀಡಲು ಮುಂದೆ ಬರುವುದಿಲ್ಲವೆಂದರೆ ಅದರಲ್ಲಿ ಅವರದ್ದೂ ದೊಡ್ಡ ಪಾಲಿದೆ ಎಂದರ್ಥ ” ಎಂದು ಹೇಳಿದರು.

ಇದೇ ವೇಳೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರತಂದ ಸಂದರ್ಶನ ಮ್ಯಾಗಜಿನ್ ಮತ್ತು ಕ್ಯಾಂಪಸ್ ಪತ್ರಿಕೆ, ‘ದಿ ಎನ್. ಸಿ.ಜೆ ಟೈಮ್ಸ್’ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಎನ್ ಇ ಎಸ್ ಆಫ್ ಕರ್ನಾಟಕದ ಅಧ್ಯಕ್ಷರಾದ ಡಾ. ಎಚ್.ಎನ್. ಸುಬ್ರಹ್ಮಣ್ಯ, ಕಾರ್ಯದರ್ಶಿ ವಿ. ವೆಂಕಟಾಶಿವಾ ರೆಡ್ಡಿ, ಚೇರ್ಮನ್ ಡಾ. ವೆಂಕಟರಾಮರೆಡ್ಡಿ , ಪ್ರಾಂಶುಪಾಲೆ ಡಾ. ಸಿ. ವಿಜಯಲಕ್ಷ್ಮಿ, ಡಾ. ಜಯದೇವಪ್ಪ, ಪ್ರೊ. ಚೆಲುವಪ್ಪ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ವೈಶಾಲಿ ಎಚ್.ಬಿ. ಉಪಸ್ಥಿತರಿದ್ದರು.

Read More
Next Story