Will the Rohith Vemula Act Uproot Caste Discrimination in Educational Institutions?
x
ಎಐ ರಚಿತ ಚಿತ್ರ.

ಜಾತಿ ಜನಗಣತಿ ಸಮೀಕ್ಷೆಗೆ ವೇಗ: ಹಿಂದುಳಿದ ವರ್ಗಗಳ ಆಯೋಗಕ್ಕೆ ಹೊಸ ಸದಸ್ಯರ ನೇಮಕ

ಈ ನೇಮಕಾತಿಯು ರಾಜ್ಯದ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಆಳವಾಗಿ ಅಧ್ಯಯನ ಮಾಡಿ, ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸುವ ಆಯೋಗದ ಜವಾಬ್ದಾರಿಯನ್ನು ಬಲಪಡಿಸಲಿದೆ.


ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಹೊಸ ಜಾತಿ ಜನಗಣತಿ ಸಮೀಕ್ಷೆ ನಡೆಸುವ ತನ್ನ ಸಿದ್ಧತೆಗಳನ್ನು ತೀವ್ರಗೊಳಿಸಿದ್ದು, ಈ ಪ್ರಕ್ರಿಯೆಯ ಭಾಗವಾಗಿ ಹಿಂದುಳಿದ ವರ್ಗಗಳ ಆಯೋಗಕ್ಕೆ ನಾಲ್ವರು ಹೊಸ ಸದಸ್ಯರನ್ನು ನೇಮಿಸಿದೆ. ಈ ನೇಮಕಾತಿಗಳು ಆಯೋಗದ ಕಾರ್ಯನಿರ್ವಹಣೆಗೆ ಹೊಸ ಚೈತನ್ಯ ತುಂಬಲಿವೆ ಎಂದು ನಿರೀಕ್ಷಿಸಲಾಗಿದೆ.

ನೂತನವಾಗಿ ನೇಮಕಗೊಂಡ ಸದಸ್ಯರಲ್ಲಿ ನಿವೃತ್ತ ಐಜಿಪಿ ಕೆ. ಅರ್ಕೇಶ್ ಸೇರಿದ್ದಾರೆ. ಮಾನವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅರ್ಕೇಶ್ ತಮ್ಮ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ಇನ್ನು, ಬಿ.ಎ, ಎಲ್‌ಎಲ್‌ಬಿ ಪದವೀಧರರು ಹಾಗೂ ವಕೀಲರಾದ ಶಿವಣ್ಣಗೌಡ. ಸಮಾಜಶಾಸ್ತ್ರದಲ್ಲಿ ಎಂ.ಎ ಮತ್ತು ಪಿಎಚ್‌ಡಿ ಪಡೆದಿರುವ ಸಹಾಯಕ ಪ್ರಾಧ್ಯಾಪಕಿ ಡಾ. ಬಿ. ಸುಮನಾ, ನಿವೃತ್ತ ಪ್ರಾಂಶುಪಾಲ , ಎಂ.ಎ, ಪಿಎಚ್‌ಡಿ ಪದವೀಧರರಾದ ಡಾ. ಸಿ.ಎಂ. ಕುಂದಗೊಳ ಆಯೋಗಕ್ಕೆ ಸೇರ್ಪಡೆಗೊಂಡಿದ್ದಾರೆ.

ಈ ನೇಮಕಾತಿಯು ರಾಜ್ಯದ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಆಳವಾಗಿ ಅಧ್ಯಯನ ಮಾಡಿ, ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸುವ ಆಯೋಗದ ಜವಾಬ್ದಾರಿಯನ್ನು ಬಲಪಡಿಸಲಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

Read More
Next Story