Boat Capsizes During Kantara Chapter 1 Shoot; Official Statement Awaited
x

ಕಾಂತಾರ 1 ಚಾಪ್ಟರ್ ಚಿತ್ರೀಕರಣ ವೇಳೆ ದೋಣಿ ಮಗುಚಿದ ಸುದ್ದಿ; ಇನ್ನೂ ಸಿಗದ ಸ್ಪಷ್ಟನೆ

ಘಟನೆ ನಡೆದು ಹಲವು ಗಂಟೆಗಳು ಕಳೆದರೂ ಚಿತ್ರತಂಡವಾಗಲೀ ಅಥವಾ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳಾಗಲೀ ಈ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡಿಲ್ಲ.


ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ 'ಕಾಂತಾರ 1 ಚಾಪ್ಟರ್' ಚಿತ್ರದ ಚಿತ್ರೀಕರಣದ ವೇಳೆ ಹೊಸನಗರ ತಾಲೂಕಿನ ವಾರಾಹಿ ಹಿನ್ನೀರಿನಲ್ಲಿ ದೋಣಿ ಮಗುಚಿ ಬಿದ್ದಿದೆ ಎಂಬುದಾದಿ ವರದಿಯಾಗಿದೆ. ಈ ಚಿತ್ರ ತಂಡದ ಸಹ ಕಲಾವಿದರು ನಾನಾ ಕಾರಣಗಳಿಗೆ ಮೃತಪಟ್ಟ ಬಳಿಕ ನಡೆದ ಮತ್ತೊಂದು ದುರಂತ ಎಂದು ಹೇಳಲಾಗುತ್ತಿದೆ. ಆದರೆ, ಶನಿವಾರ ನಡೆದಿದೆ ಎನ್ನಲಾದ ಘಟನೆ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ

ದೋಣಿ ಮಗುಚಿ ಸುಮಾರು 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ, ಘಟನೆ ನಡೆದು ಹಲವು ಗಂಟೆಗಳು ಕಳೆದರೂ ಚಿತ್ರತಂಡವಾಗಲೀ ಅಥವಾ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳಾಗಲೀ ಈ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಘಟನೆಯಲ್ಲಿ ರಿಷಬ್ ಶೆಟ್ಟಿ ಸೇರಿದಂತೆ ಎಡಲ್ಲರೂ ಅದೃಷ್ಟವಶಾತ್ ಪಾರಾಗಿದ್ದಾರೆ" ಎಂದು ಒಂದು ವರದಿ ಹೇಳಿದೆ.

ಇನ್ನೊಂದು ಮೂಲಗಳ ಪ್ರಕಾರ ಅದು ದೋಣಿ ಅಲ್ಲ, ನೀರಿನ ಮೇಲೆ ಹಾಕಿದ್ದ ಸೆಟ್​ ಮಗುಚಿದೆ ಎಂದು ಹೇಳಿದೆ. ಜನರು ಪಾರಾಗಾಗಿದ್ದರೂ ಕ್ಯಾಮೆರಾ ಮತ್ತು ಇನ್ನಿತರ ಉಪಕರಣಗಳು ಹಾಳಾಗಿವೆ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರತಂಡ ಸಂಪೂರ್ಣ ಮೌನ ವಹಿಸಿದೆ. ಅವಘಡ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದ್ದರೂ, ಚಿತ್ರೀಕರಣಕ್ಕೆ ಅನುಮತಿ ನೀಡಿದ ಕೆಪಿಸಿ (ಕರ್ನಾಟಕ ಪವರ್ ಕಾರ್ಪೊರೇಷನ್) ಅಧಿಕಾರಿಗಳಿಗಾಗಲೀ, ಅಥವಾ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗಾಗಲೀ ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ.

ಪೊಲೀಸರಿಗೆ ಘಟನಾ ಸ್ಥಳಕ್ಕೆ ಪ್ರವೇಶಿಸಲು ಸಹ ಅವಕಾಶ ನೀಡಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ವಾರಾಹಿ ಯೋಜನೆಯು ಸೂಕ್ಷ್ಮ ಮತ್ತು ಭದ್ರತಾ ದೃಷ್ಟಿಯಿಂದ ಮಹತ್ವದ ಪ್ರದೇಶವಾಗಿದ್ದು, ಸಾಮಾನ್ಯವಾಗಿ ಸ್ಥಳೀಯರಿಗೂ ಡ್ಯಾಂ ದಾರಿಯಲ್ಲಿ ಸಂಚರಿಸಲು ಕಟ್ಟುನಿಟ್ಟಿನ ನಿಯಮಗಳಿವೆ. ಹೀಗಾಗಿ ವಿಚಾರ ಏನೆಂಬುದು ಯಾರಿಗೂ ಗೊತ್ತಾಗುತ್ತಿಲ್ಲ.

Read More
Next Story