Israel attacks Iran : ಇರಾನ್ ಮೇಲೆ ಇಸ್ರೇಲ್​ ದಾಳಿಗೆ ಭಾರತ ಆತಂಕ; ತನ್ನ ನಾಗರಿಕರಿಗೆ ಸುರಕ್ಷಿತವಾಗಿರಲು ಸಲಹೆ
x

Israel attacks Iran : ಇರಾನ್ ಮೇಲೆ ಇಸ್ರೇಲ್​ ದಾಳಿಗೆ ಭಾರತ ಆತಂಕ; ತನ್ನ ನಾಗರಿಕರಿಗೆ ಸುರಕ್ಷಿತವಾಗಿರಲು ಸಲಹೆ

Israel attacks Iran: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ ತೀವ್ರಗೊಂಡಿರುವುದರಿಂದ ಎರಡೂ ದೇಶಗಳು ಉದ್ವಿಗ್ನ ಕ್ರಮಗಳನ್ನು ತಪ್ಪಿಸಬೇಕು ಹಾಗೂ ಅದಕ್ಕಾಗಿ ಎಲ್ಲ ಸಹಕಾರಕ್ಕೂ ಸಿದ್ಧ ಎಂದು ಭಾರತ ಹೇಳಿದೆ.


ಇಸ್ರೇಲ್ ಮತ್ತು ಇರಾನ್ ನಡುವಿನ ಮಿಲಿಟರಿ ಘರ್ಷಣೆಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಶುಕ್ರವಾರದಂದು ತನ್ನ ಹೇಳಿಕೆ ಬಿಡುಗಡೆ ಮಾಡಿದ ವಿದೇಶಾಂಗ ಸಚಿವಾಲಯ, ಈ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದೇವೆ" ಎಂದು ತಿಳಿಸಿದೆ.



ಎರಡೂ ದೇಶಗಳು ಯಾವುದೇ ಉದ್ವಿಗ್ನ ಕ್ರಮಗಳನ್ನು ತೆಗೆದುಕೊಳ್ಳದೇ ಶಾಂತಿ ಮಾತುಕತೆಗೆ ಮುಂದಾಗಕಬೇ ಬಲವಾಗಿ ಮನವಿ ಮಾಡಿದೆ.

ಇರಾನ್‌ನ "ಪರಮಾಣು ಸೌಲಭ್ಯಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಖಾನೆಗಳ" ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂಬ ಅಂತಾರಾಷ್ಟ್ರೀಯ ವರದಿಗಳ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ. "ಇರಾನ್ ಮತ್ತು ಇಸ್ರೇಲ್ ನಡುವಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನಾವು ತೀವ್ರ ಆತಂಕಿತರಾಗಿದ್ದೇವೆ. ಪರಮಾಣು ಕೇಂದ್ರಗಳ ಮೇಲಿನ ದಾಳಿಗಳ ಸೇರಿದಂತೆ ಸ್ಥಿತಿಗತಿಯನ್ನು ನಾವು ನಿಕಟವಾಗಿ ಗಮನಿಸುತ್ತಿದ್ದೇವೆ," ಎಂದು ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ ತೀವ್ರಗೊಂಡಿರುವುದರಿಂದ ಎರಡೂ ದೇಶಗಳು ಉದ್ವಿಗ್ನ ಕ್ರಮಗಳನ್ನು ತಪ್ಪಿಸಬೇಕು" ಎಂದು ಭಾರತ ಒತ್ತಾಯಿಸಿದೆ. , "ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಉಪಯೋಗಿಸಿಕೊಂಡು ಪರಿಸ್ಥಿತಿ ತಿಳಿಗೊಳಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡಬೇಕು" ಎಂದು ಹೇಳಿದೆ.

ಭಾರತವು ಇರಾನ್ ಮತ್ತು ಇಸ್ರೇಲ್ ಎರಡೂ ದೇಶಗಳೊಂದಿಗೆ "ನಿಕಟ ಮತ್ತು ಸೌಹಾರ್ದ ಸಂಬಂಧ"ವನ್ನು ಹೊಂದಿದೆ ಎಂದು ಹೇಳಿದೆ. ಅಲ್ಲದೆ, "ಎಲ್ಲ ಸಾಧ್ಯವಾದ ಬೆಂಬಲ ಒದಗಿಸಲು ಸಿದ್ಧವಾಗಿದೆ" ಎಂದು ಒತ್ತಿಹೇಳಿದೆ.

ಭಾರತೀಯ ನಾಗರಿಕರಿಗೆ ಸೂಚನೆ

ಈ ಪ್ರದೇಶದಲ್ಲಿರುವ ಎಲ್ಲ ಭಾರತೀಯ ನಾಗರಿಕರಿಗೆ ಸುರಕ್ಷತಾ ಸಲಹೆಗಳನ್ನು ನೀಡಲಾಗಿದೆ. "ನಮ್ಮ ರಾಯಭಾರ ಕಚೇರಿಗಳು ಎರಡೂ ದೇಶಗಳಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂಪರ್ಕದಲ್ಲಿವೆ. ಈ ಪ್ರದೇಶದ ಎಲ್ಲ ಭಾರತೀಯ ನಾಗರಿಕರಿಗೆ ಎಚ್ಚರಿಕೆಯಿಂದಿರಲು, ಸುರಕ್ಷಿತವಾಗಿರಲು ಮತ್ತು ಸ್ಥಳೀಯ ಭದ್ರತಾ ಸಲಹೆಗಳನ್ನು ಪಾಲಿಸಲು ಸೂಚಿಸಲಾಗಿದೆ," ಎಂದು ಸಚಿವಾಳಯ ಹೇಳಿಕೆಯಲ್ಲಿ ತಿಳಿಸಿದೆ.

Read More
Next Story