ಹೃದಯ ಶಸ್ತ್ರಚಿಕಿತ್ಸೆ: ಮನೆಗೆ ಮರಳಿದ ರಜನಿಕಾಂತ್
x

ಹೃದಯ ಶಸ್ತ್ರಚಿಕಿತ್ಸೆ: ಮನೆಗೆ ಮರಳಿದ ರಜನಿಕಾಂತ್

ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಶಸ್ತ್ರಚಿಕಿತ್ಸೆಯಿಲ್ಲದೆ ಸ್ಟೆಂಟ್‌ ಅಳವಡಿಕೆ ಬಳಿಕ ಕೆಲ ಕಾಲ ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗಿದೆ. ಅವರು ಶೀಘ್ರದಲ್ಲೇ 'ಕೂಲಿ' ಸೆಟ್‌ಗೆ ಮರಳುವ ನಿರೀಕ್ಷೆಯಿದೆ.


ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರು ಅಕ್ಟೋಬರ್ 3ರಂದು ರಾತ್ರಿ ನಂತರ ಚೆನ್ನೈನ ಅಪೋಲೋ ಆಸ್ಪತ್ರೆಯಿಂದ ಮನೆಗೆ ಮರಳಿದರು.

ಅವರನ್ನು ಹೃದಯದ ಪ್ರಮುಖ ರಕ್ತನಾಳದಲ್ಲಿನ ಊತದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು; ಶಸ್ತ್ರಚಿಕಿತ್ಸೆಯಲ್ಲದ ವಿಧಾನದ ಮೂಲಕ ವೈದ್ಯರು ಅವರಿಗೆ ಅಕ್ಟೋಬರ್ 1 ರಂದು ಸ್ಟೆಂಟ್ ಅಳವಡಿಸಿದ್ದಾರೆ. ಚಿಕಿತ್ಸೆ ಯಶಸ್ವಿಯಾಗಿದ್ದು, ಎರಡು ದಿನ ವೀಕ್ಷಣೆಯಲ್ಲಿ ಇರಿಸಲಾಗಿತ್ತು. ಅವರಿಗೆ ಒಂದೆರಡು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.

'ತಲೈವರ್' ಶೀಘ್ರದಲ್ಲೇ ವಾಪಸ್:‌ ವೈದ್ಯರು ಹಸಿರು ನಿಶಾನೆ ತೋರಿಸಿದರೆ, ʻತಲೈವರ್ʼ ಶೀಘ್ರದಲ್ಲೇ ಲೋಕೇಶ್ ಕನಕರಾಜ್ ಅವರ ʻಕೂಲಿʼ ಚಿತ್ರದ ಚಿತ್ರೀಕರಣ ಪುನಾರಂಭಿಸಲಿದ್ದಾರೆ.

ರಜನಿಕಾಂತ್ ಅವರು ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ದುರಸ್ತಿಗೆ ಒಳಗಾಗಿದ್ದರು. ಡಾ.ಸಾಯಿ ಸತೀಶ್ ಚಿಕಿತ್ಸೆಯ ನೇತೃತ್ವ ವಹಿಸಿದ್ದರು. ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಪೋಲೋ ಆಸ್ಪತ್ರೆಯ ಬುಲೆಟಿನ್ ಹೇಳಿದೆ.

ಯಾವ ಸಿನಿಮಾ ಸಿದ್ಧ?: ಟಿ.ಜೆ. ಜ್ಞಾನವೇಲ್ ನಿರ್ದೇಶನದ ವೆಟ್ಟೈಯನ್ ಅಕ್ಟೋಬರ್‌ 10 ರಂದು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ತಾರಾಗಣವಿದೆ.

ರಜನಿಕಾಂತ್ ಅವರು ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿ ಕೂಲಿ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದರು.

Read More
Next Story