ಥಿಯೇಟರ್ ಬಳಿಕ ಒಟಿಟಿಗೆ ‘ಭಾರತ್ ಭಾಗ್ಯ ವಿಧಾತಾ’: ಆಗಸ್ಟ್ 14ಕ್ಕೆ ಬಿಡುಗಡೆ
x

ಕಂಗನಾ ರಣಾವತ್ ಅಭಿನಯದ ‘ಭಾರತ್ ಭಾಗ್ಯ ವಿಧಾತಾ’ ಆಗಸ್ಟ್ 14ರಂದು ZEE5ನಲ್ಲಿ ಬಿಡುಗಡೆಯಾಗಲಿದೆ.

ಥಿಯೇಟರ್ ಬಳಿಕ ಒಟಿಟಿಗೆ ‘ಭಾರತ್ ಭಾಗ್ಯ ವಿಧಾತಾ’: ಆಗಸ್ಟ್ 14ಕ್ಕೆ ಬಿಡುಗಡೆ

ಕಂಗನಾ ರಣಾವತ್ ಅಭಿನಯದ ‘ಭಾರತ್ ಭಾಗ್ಯ ವಿಧಾತಾ’ ಆಗಸ್ಟ್ 14ರಂದು ZEE5ನಲ್ಲಿ ಬಿಡುಗಡೆಯಾಗಲಿದೆ. 26/11 ದಾಳಿಯಲ್ಲಿ ಆಸ್ಪತ್ರೆ ಸಿಬ್ಬಂದಿಯ ಧೈರ್ಯದ ಕಥೆ ಚಿತ್ರದಲ್ಲಿದೆ.


Click the Play button to hear this message in audio format

ಕಂಗನಾ ರಣಾವತ್ ಅಭಿನಯದ ‘ಭಾರತ್ ಭಾಗ್ಯ ವಿಧಾತಾ’ ಸಿನಿಮಾ ಆಗಸ್ಟ್ 14ರಂದು ZEE5ನಲ್ಲಿ ಒಟಿಟಿ ಪ್ರೀಮಿಯರ್ ಕಾಣಲಿದೆ. ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಬಳಿಕ ಚಿತ್ರತಂಡ ಒಟಿಟಿ ಬಿಡುಗಡೆ ದಿನಾಂಕ ಘೋಷಿಸಿದೆ.

ಮನುಜ್ ತಪಾಡಿಯಾ ಬರೆದು ನಿರ್ದೇಶಿಸಿರುವ ಈ ಚಿತ್ರ ಮುಂಬೈನ ಕಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಯನ್ನು ಹಿನ್ನೆಲೆಯಾಗಿಸಿಕೊಂಡಿದೆ. 2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಉಗ್ರ ದಾಳಿಯ ಸಂದರ್ಭದಲ್ಲಿ ಆಸ್ಪತ್ರೆಯ ನರ್ಸ್‌ಗಳು, ವಾರ್ಡ್ ಬಾಯ್‌ಗಳು, ಸ್ವಚ್ಛತಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸೇರಿದಂತೆ ಹಲವು ಸಿಬ್ಬಂದಿ ರೋಗಿಗಳ ರಕ್ಷಣೆಗೆ ಹೇಗೆ ಧೈರ್ಯದಿಂದ ನಿಂತರು ಎಂಬುದನ್ನು ಸಿನಿಮಾ ಹೇಳುತ್ತದೆ.

ಚಿತ್ರದ ಒಟಿಟಿ ಬಿಡುಗಡೆಯ ಕುರಿತು ಮಾತನಾಡಿರುವ ಕಂಗನಾ ರಣಾವತ್, ಹೇಳಲೇಬೇಕಾದ ಕಥೆಗಳು ನಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತವೆ. ‘ಭಾರತ್ ಭಾಗ್ಯ ವಿಧಾತಾ’ ಅಂತಹ ಒಂದು ಕಥೆ ಎಂದು ಹೇಳಿದ್ದಾರೆ. ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿಯೂ 26/11 ದಾಳಿಯ ವೇಳೆ ಭಯೋತ್ಪಾದನೆ ಮತ್ತು ಮಾನವೀಯತೆಯ ನಡುವೆ ನಿಂತ ಆರೋಗ್ಯ ಕಾರ್ಯಕರ್ತರ ಹೇಳದ ಕಥೆಗಳನ್ನು ತೆರೆಗೆ ತರುವುದು ತಮಗೆ ಅತ್ಯಂತ ಮುಖ್ಯವಾಗಿತ್ತು ಎಂದು ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲೇ ಚಿತ್ರ ಬಿಡುಗಡೆಯಾಗುತ್ತಿರುವುದು ಅದರ ಸಂದೇಶವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸುತ್ತದೆ ಎಂದು ಕಂಗನಾ ಹೇಳಿದ್ದಾರೆ. ದೇಶದ ಗಡಿಯಲ್ಲಿ ಹೋರಾಡುವವರಷ್ಟೇ ಅಲ್ಲದೆ, ಸಂಕಷ್ಟದ ಸಂದರ್ಭದಲ್ಲಿ ಅಸಾಮಾನ್ಯ ಧೈರ್ಯ ತೋರುವ ಸಾಮಾನ್ಯ ನಾಗರಿಕರೂ ಭಾರತದ ಆತ್ಮವನ್ನು ಪ್ರತಿನಿಧಿಸುತ್ತಾರೆ ಎಂಬುದನ್ನು ಚಿತ್ರ ನೆನಪಿಸುತ್ತದೆ ಎಂದಿದ್ದಾರೆ.

ಗಿರಿಜಾ ಓಕ್, ಸ್ಮಿತಾ ತಾಂಬೆ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ಚಿತ್ರವು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಅನಗತ್ಯ ಹಾಸ್ಯ, ಅತಿಯಾದ ಭಾವುಕತೆ ಹಾಗೂ ಉಪದೇಶದ ಧಾಟಿ ಚಿತ್ರದ ನಿರೂಪಣೆಯನ್ನು ಭಾರವಾಗಿಸಿದೆ ಎಂದು ವಿಮರ್ಶೆಗಳು ಅಭಿಪ್ರಾಯಪಟ್ಟಿದ್ದವು.

Read More
Next Story