ಅಖಾಡಕ್ಕೆ ರೆಡಿಯಾದ ಕಬ್ಜ ಚಂದ್ರು: ಬಿಡುಗಡೆಗೆ ಸಿದ್ಧವಾಗಿದೆ ಫಾದರ್ ಸಿನಿಮಾ
x

ಡಾರ್ಲಿಂಗ್ ಕೃಷ್ಣ ಹಾಗೂ ಅಮೃತಾ ಅಯ್ಯಂಗಾರ್ 'ಟಗರು ಪಲ್ಯ' ಖ್ಯಾತಿಯ ನಾಗಭೂಷಣ್‌ 

ಅಖಾಡಕ್ಕೆ ರೆಡಿಯಾದ 'ಕಬ್ಜ' ಚಂದ್ರು: ಬಿಡುಗಡೆಗೆ ಸಿದ್ಧವಾಗಿದೆ 'ಫಾದರ್' ಸಿನಿಮಾ

ಈ ಚಿತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ತಂದೆಯಾಗಿ ಮತ್ತು ಡಾರ್ಲಿಂಗ್ ಕೃಷ್ಣ ಮಗನಾಗಿ ನಟಿಸಿದ್ದು, ಅಮೃತಾ ಅಯ್ಯಂಗಾರ್ ಹಾಗೂ ನಾಗಭೂಷಣ್ ಪ್ರಮುಖ ಪಾತ್ರಗಳಲ್ಲಿದ್ದಾರೆ.


Click the Play button to hear this message in audio format

ತಾಜ್ ಮಹಲ್' ಮತ್ತು 'ಚಾರ್ ಮಿನಾರ್' ನಂತಹ ಭಾವನಾತ್ಮಕ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿದ್ದ ನಿರ್ದೇಶಕ ಆರ್. ಚಂದ್ರು, ಈಗ ನಿರ್ಮಾಪಕರಾಗಿ ಮತ್ತೊಂದು ಹೊಸ ಪಯಣ ಆರಂಭಿಸಿದ್ದಾರೆ. ಅವರ ಹೆಮ್ಮೆಯ 'ಆರ್.ಸಿ ಸ್ಟುಡಿಯೋಸ್' ಲಾಂಛನದ ಅಡಿಯಲ್ಲಿ ನಿರ್ಮಾಣವಾಗಿರುವ "ಫಾದರ್" ಚಿತ್ರವು ಎಲ್ಲಾ ಕೆಲಸಗಳನ್ನು ಪೂರೈಸಿ ಈಗ ಬೆಳ್ಳಿ ಪರದೆಗೆ ಬರಲು ಸಂಪೂರ್ಣವಾಗಿ ಸಜ್ಜಾಗಿದೆ.

ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈ ಚಿತ್ರದ ಥೀಮ್ ವಿಡಿಯೋ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ಜರುಗಿತು. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ಸಾಮಾನ್ಯವಾಗಿ ಸ್ಟಾರ್ ನಟರನ್ನು ಕರೆಸಿ ಸಿನಿಮಾ ಪ್ರಚಾರ ಮಾಡುವ ಸಂಪ್ರದಾಯವನ್ನು ಬದಿಗಿಟ್ಟು, ಆರ್. ಚಂದ್ರು ಅವರು ತಮ್ಮ ತಂದೆಯನ್ನೇ ಮುಖ್ಯ ಅತಿಥಿಯಾಗಿ ಕರೆಸಿ ಅವರಿಂದಲೇ ವಿಡಿಯೋ ಬಿಡುಗಡೆ ಮಾಡಿಸಿದರು.

ಭಾವನಾತ್ಮಕ ಕಥಾ ಹಂದರ

"ಫಾದರ್" ಕೇವಲ ಹೆಸರಲ್ಲ, ಅದೊಂದು ಭಾವನೆ ಎನ್ನುವುದನ್ನು ಈ ಥೀಮ್ ವಿಡಿಯೋ ಸಾಬೀತುಪಡಿಸುತ್ತಿದೆ. ಅಪ್ಪ-ಮಗನ ನಡುವಿನ ಮೌಲ್ಯಗಳು, ಬಾಂಧವ್ಯ ಮತ್ತು ಅಪ್ಪನ ಬೆಲೆಯನ್ನು ತಿಳಿಸುವ ಈ ಚಿತ್ರಕ್ಕೆ ರಾಜ್ ಮೋಹನ್ ಆಕ್ಷನ್ ಕಟ್ ಹೇಳಿದ್ದಾರೆ. ತಂದೆಯ ಪಾತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಹಾಗೂ ಮಗನಾಗಿ ಡಾರ್ಲಿಂಗ್ ಕೃಷ್ಣ ನಟಿಸಿದ್ದು, ಈ ವಿಭಿನ್ನ ಕಾಂಬಿನೇಷನ್ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. 'ಲವ್ ಮಾಕ್ಟೇಲ್' ಖ್ಯಾತಿಯ ಅಮೃತಾ ಅಯ್ಯಂಗಾರ್ ಮತ್ತು ನಾಗಭೂಷಣ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಈಗಾಗಲೇ ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ ಚಂದ್ರು, ಈ ಚಿತ್ರವನ್ನೂ ಸಹ ಪ್ಯಾನ್ ಇಂಡಿಯಾ ಮಟ್ಟದಲ್ಲೇ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ. ಮೈಸೂರು, ಮಂಗಳೂರು, ಧರ್ಮಸ್ಥಳ ಹಾಗೂ ವಾರಣಾಸಿಯಂತಹ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ಮತ್ತು ಸುಜ್ಞಾನ್ ಅವರ ಛಾಯಾಗ್ರಹಣವಿದೆ.

ನಿರ್ದೇಶನಕ್ಕೆ ಯಾವಾಗ ಮರಳಲಿದ್ದಾರೆ ಚಂದ್ರು?

'ಕಬ್ಜ' ಅಂತಹ ಬೃಹತ್ ಚಿತ್ರದ ನಂತರ ಚಂದ್ರು ಅವರ ನಿರ್ದೇಶನದ ಮುಂದಿನ ಸಾಹಸ ಯಾವುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯಕ್ಕೆ ಆರ್.ಸಿ ಸ್ಟುಡಿಯೋಸ್ ಮೂಲಕ ಹೊಸಬರಿಗೆ ಅವಕಾಶ ನೀಡುತ್ತಿರುವ ಚಂದ್ರು, ಶೀಘ್ರದಲ್ಲೇ 500 ಕೋಟಿ ರೂಪಾಯಿ ಬಜೆಟ್‌ನ ಬೃಹತ್ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಲಿದ್ದಾರೆ ಎಂಬ ಸುದ್ದಿಗಳು ಗಾಂಧಿನಗರದಲ್ಲಿ ದಟ್ಟವಾಗಿವೆ.

ಸದ್ಯಕ್ಕಂತೂ "ಫಾದರ್" ಎಂಬ ಎಮೋಷನಲ್ ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆಲ್ಲಲು ಆರ್. ಚಂದ್ರು ಸಿದ್ಧರಾಗಿದ್ದಾರೆ.

Read More
Next Story