ಅಮಿತ್ ಶಾಗೆ ಕೇರಳ ಸಿಎಂ ತಿರುಗೇಟು

ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದಾರೆ. ಅಮಿತ್‌ ಶಾ ಅವರು ಆಧಾರ ರಹಿತ ಹೇಳಿಕೆ ನೀಡಿದ್ದಾರೆ. ಹವಾಮಾನ ಇಲಾಖೆಯು ಕೇವಲ ಯಲ್ಲೋ ಮತ್ತು ಆರಂಜ್ ಅಲರ್ಟ್‌ ನೀಡುತ್ತವೆ.  ಭೂಕುಸಿದದ ಎಚ್ಚರಿಕೆಯನ್ನು ನೀಡುವುದಿಲ್ಲ ಎಂದಿದ್ದಾರೆ.

ಕೇಂದ್ರದಿಂದ ಭೂಕುಸಿತದ ಬಗ್ಗೆ ನಮಗೆ ದೊರೆತ ಮುನ್ಸೂಚನೆಯು 'ಭೂ ಕುಸಿತದ ಸಾಧ್ಯತೆ ಕಡಿಮೆ' ಎಂದು ವಿಜಯನ್ ಹೇಳಿದರು.

ಬುಧವಾರ ಅಮಿತ್‌ ಶಾ ಅವರು ರಾಜ್ಯಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದು,  ಪ್ರವಾಹ ಮತ್ತು ಭೂಕುಸಿತದ ಬಗ್ಗೆ ಮುನ್ಸೂಚನೆ ನೀಡಲಾಗಿತ್ತು ಮತ್ತು ಕೇರಳ ಸರ್ಕಾರಕ್ಕೆ ಜುಲೈ, 23 ರಿಂದ ಕೇಂದ್ರವು ಅನೇಕ ಮುನ್ಸೂಚನೆಯ ಎಚ್ಚರಿಕೆಗಳನ್ನು ನೀಡಿತ್ತು. ಒಂಬತ್ತು ಎನ್‌ಡಿಆರ್‌ಎಫ್‌ ತಂಡಗಳನ್ನೂ ಕೂಡ ಕೇರಳಕ್ಕೆ ಕಳುಹಿಸಲಾಗಿತ್ತುʼʼ ಎಂದು ಹೇಳಿದ್ದಾರೆ.

Read More
Next Story