ಕೇಂದ್ರ ನೀಡಿದ ಎಚ್ಚರಿಕೆಗಳ ಬಗ್ಗೆ ಕೇರಳ ಸರ್ಕಾರ ಗಮನಹರಿಸಿಲ್ಲ: ಅಮಿತ್ ಶಾ

ವಯನಾಡ್ ಭೂಕುಸಿತ ಘಟನೆಯಲ್ಲಿ ಮುನ್ನೆಚ್ಚರಿಕೆ ವ್ಯವಸ್ಥೆಯ ವೈಫಲ್ಯದ ಎಲ್ಲಾ ಆರೋಪಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ. ಕೇಂದ್ರವು ಜುಲೈ 23 ರಂದು ಕೇರಳ ಸರ್ಕಾರಕ್ಕೆ ಮುನ್ನೆಚ್ಚರಿಕೆಯನ್ನು ರವಾನಿಸಿತ್ತು ಮತ್ತು ನಂತರ ಪ್ರತಿದಿನ ಎಚ್ಚರಿಕೆಯನ್ನು ನೀಡಲಾಗಿತ್ತು, ಆದರೆ ಕೇರಳ ಸರ್ಕಾರ ಗಮನಿಸಲಿಲ್ಲ ಎಂದು ಶಾ ಹೇಳಿದ್ದಾರೆ.

ಮುನ್ನೆಚ್ಚರಿಕೆಗಳ ಹೊರತಾಗಿಯೂ ಕೇರಳ ಸರ್ಕಾರವು ಯಾವುದೇ ಸ್ಥಳಾಂತರಿಸುವ ಕ್ರಮಗಳನ್ನು ಅನುಸರಿಸಲಿಲ್ಲ ಎಂದು ಶಾ ಹೇಳಿದರು.

Read More
Next Story