ಭಾರತದ ನೀರಿನ ಪಾಲಿನ ಪ್ರತಿ ಹನಿಯೂ ಭಾರತದಲ್ಲಿಯೇ ಉಳಿಯುತ್ತದೆ: ಗಜೇಂದ್ರ ಸಿಂಗ್ ಶೇಖಾವತ್
ಸಿಂಧೂ ಜಲ ಒಪ್ಪಂದ ಸ್ಥಗಿತಗೊಂಡಿರುವ ಕುರಿತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿದ್ದು, "ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಪ್ರಧಾನಿ ಮೊದಲೇ ಹೇಳಿದ್ದರು.1965 ರ ಯುದ್ಧ, 1971 ರ ಯುದ್ಧ ಮತ್ತು ಕಾರ್ಗಿಲ್ ಯುದ್ಧದ ಹೊರತಾಗಿಯೂ, ಭಾರತ ಒಪ್ಪಂದವನ್ನು ಗೌರವಿಸಿತು. ಆದರೆ ಈಗ ಸಂದೇಶ ಸ್ಪಷ್ಟವಾಗಿದೆ. ಈಗ ಭಾರತ ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತದ ಹಿತಾಸಕ್ತಿಗಳೊಂದಿಗೆ ಆಟವಾಡಲು ಸಾಧ್ಯವಿಲ್ಲ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಗಿದೆ. ನಾವು ಅವರೊಂದಿಗೆ ಡೇಟಾ ಹಂಚಿಕೆಯನ್ನು ನಿಲ್ಲಿಸಿದ್ದೇವೆ. ಭಾರತದ ನೀರಿನ ಪ್ರತಿ ಹನಿಯೂ ಭಾರತದಲ್ಲಿಯೇ ಉಳಿಯುತ್ತದೆ. ಸರ್ಕಾರ ಇದಕ್ಕೆ ಬದ್ಧವಾಗಿದೆ'' ಎಂದು ಅವರು ತಿಳಿಸಿದ್ದಾರೆ.
Next Story