ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ಬೇಡ: ಶಾಸಕ ಅಶ್ವಥ್ ನಾರಾಯಣ್


ಸಂವಿಧಾನದ 73 ,74ನೇ ವಿಧಿಯಡಿ ಸ್ಥಳೀಯ ಸಂಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ. ವಿಧಿ 243 ರಂತೆ ಸ್ಥಳೀಯ ಸಂಸ್ಥೆಗಳಿಗೆ ಹಸ್ತಕ್ಷೇಪ ಇರಬಾರದು. ಆದರೆ ಸರ್ಕಾರ ಇಲ್ಲಿ‌ಹಸ್ತಕ್ಷೇಪ ಮಾಡಿದೆ ಎಂದು ಶಾಸಕ ಅಶ್ವಥ್ ನಾರಾಯಣ್ ತಿಳಿಸಿದರು.

ಸ್ಥಳೀಯ ಸಂಸ್ಥೆ ಆಡಳಿತವನ್ನು ಸರ್ಕಾರವೇ ತೆಗೆದುಕೊಂಡಿದೆ. ಕಾರ್ಪೋರೇಟರ್ ಕೆಲಸಗಳನ್ನು ಸರ್ಕಾರವೇ ಮಾಡುತ್ತಿದೆ. ಇಲ್ಲಿ ಪೂರ್ಣ ಸ್ವರಾಜ್ಯದ ಕಲ್ಪನೆ ಮಾಯವಾಗಿದೆ. ಇದು ಸ್ವಾಯತ್ತ ಸಂಸ್ಥೆಗಳ ಅವನತಿಗೆ ಕಾರಣವಾಗಿದೆ ಎಂದು ತಿಳಿಸಿದರು.

ಗ್ರೇಟರ್ ಬೆಂಗಳೂರು ಅನುಮೋದನೆಗೆ ಅವಕಅಶ ನೀಡುವುದಿಲ್ಲ. ಸರ್ಕಾರದ ಮುಖ್ಯಸ್ಥರೂ ಸಿಎಂ,ಕಾರ್ಪೋರೇಷನ್ ಮುಖ್ಯಸ್ಥರು ಸಿಎಂ ಆಗಿದ್ದಾರೆ. ಇಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸ್ವಾತಂತ್ರ್ಯವೇ ಇಲ್ಲದಾಗಿದ್ದು ಎಲ್ಲವ‌ನ್ನೂ ಸರ್ಕಾರವೇ ಕಿತ್ತುಕೊಳ್ಳಲಿದೆ. ಪೂರ್ಣ ಅಧಿಕಾರವನ್ನು ಸ್ತಳೀಯ ಸಂಸ್ಥೆಗಳಿಗೆ ನೀಡಬೇಕು ಎಂದರು.

 

Read More
Next Story