ಕೇರಳದಾದ್ಯಂತ 118 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ: ವಿಜಯನ್

ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದೇವೆ. ಇನ್ನೂ ಅನೇಕ ಜನರು ಅವಶೇಷಗಳಡಿ ಸಿಲುಕಿದ್ದಾರೆ. ನಾವು ವಯನಾಡಿನಲ್ಲಿ 45 ಪರಿಹಾರ ಶಿಬಿರಗಳನ್ನು ಮತ್ತು ರಾಜ್ಯದಾದ್ಯಂತ ಒಟ್ಟು 118 ಶಿಬಿರಗಳನ್ನು ತೆರೆದಿದ್ದೇವೆ, 5,531 ಜನರಿಗೆ ವಸತಿ ಕಲ್ಪಿಸಲಾಗಿದೆ. ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಮತ್ತು ಪೊಲೀಸರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಸೇನೆ ಮತ್ತು ನೌಕಾಪಡೆಯ ವಿವಿಧ ವಿಭಾಗಗಳು ರಕ್ಷಣಾ ಕಾರ್ಯಾಚರಣೆಯನ್ನು ಸಮನ್ವಯಗೊಳಿಸುತ್ತಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್

"ವಯನಾಡಿನಲ್ಲಿ ಅಗ್ನಿಶಾಮಕ ದಳದ 321 ಸದಸ್ಯರನ್ನು ನಿಯೋಜಿಸಲಾಗಿದೆ. ಸೇನೆಯ ಸೇವೆಯೂ ಲಭ್ಯವಾಗಿದೆ. 60 ಸದಸ್ಯರ ಎನ್‌ಡಿಆರ್‌ಎಫ್ ತಂಡ ವಯನಾಡ್ ತಲುಪಿದೆ ಮತ್ತು ಬೆಂಗಳೂರಿನ 89 ಸದಸ್ಯರ ತಂಡವು ದಾರಿಯಲ್ಲಿದೆ. ಪ್ರಧಾನಿ ಮತ್ತು ರಾಹುಲ್ ಗಾಂಧಿ ಮತ್ತು ವಿವಿಧ ಪಕ್ಷದ ನಾಯಕರು ತಮ್ಮ ಸಹಾಯವನ್ನು ನೀಡಿದ್ದಾರೆ, ಈ ವಿಪತ್ತು ಬಿಕ್ಕಟ್ಟನ್ನು ಪರಿಹರಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅವರು ನಮಗೆ ಭರವಸೆ ನೀಡಿದ್ದಾರೆ ಎಂದು ವಿಜಯನ್‌ ತಿಳಿಸಿದರು.

Read More
Next Story