ನೇತ್ರಾವತಿ ನದಿ ದಡದಲ್ಲಿ ಶವ ಪತ್ತೆಗೆ ಅಗೆತ, ಸವಾಲುಗಳ ಸುರಿಮಳೆ!
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹಳೆಯ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ, ವಿಶೇಷ ತನಿಖಾ ದಳವು (SIT) ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಹೂಳಲಾಗಿರುವ ಮೃತದೇಹಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ, ಸಾಕ್ಷಿದಾರರು ತೋರಿಸಿದ ಜಾಗದಲ್ಲಿ ಅಗೆತದ ಕಾರ್ಯವನ್ನು SIT ಆರಂಭಿಸಿದೆ. ಸಾಕ್ಷಿದಾರರು ತೋರಿಸಿದ ಮೊದಲ ಸ್ಥಳವು ನೇತ್ರಾವತಿ ನದಿಯ ದಡದಲ್ಲೇ ಇದೆ. ನದಿ ಮತ್ತು ಅಗೆಯುತ್ತಿರುವ ಜಾಗದ ನಡುವೆ ಕೇವಲ 10 ಮೀಟರ್ ಅಂತರವಿದ್ದು, ಇದು ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನದಿಯ ನೀರಿನಿಂದಾಗಿ ಮಣ್ಣು ಸಡಿಲಗೊಳ್ಳುವ ಸಾಧ್ಯತೆ ಇದ್ದು, ಮೃತದೇಹಗಳ ಪತ್ತೆ ಕಾರ್ಯವು ಮತ್ತಷ್ಟು ಕ್ಲಿಷ್ಟಕರವಾಗಲಿದೆ.
Next Story