ಇಂಡಿಯಾ ಒಕ್ಕೂಟ ಸರ್ಕಾರ: ನಾಳೆ ನಿರ್ಧಾರ- ರಾಹು‌‌ಲ್‌

ಇಂಡಿಯ ಒಕ್ಕೂಟ ವಿರೋಧ ಪಕ್ಷದಲ್ಲಿ ಉಳಿಯುವುದೇ ಅಥವಾ ಸರ್ಕಾರ ರಚಿಸಲು ನಿರ್ಧರಿಸಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ರಾಹುಲ್‌ ಗಾಂಧಿ, ಜೆಡಿಯು, ಟಿಡಿಪಿಯನ್ನು ಸಂಪರ್ಕಿಸುವ ಕುರಿತು ನಾಳೆ ಇಂಡಿಯ ಒಕ್ಕೂಟದ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು. ನಾವು ನಮ್ಮ ಪಾಲುದಾರರನ್ನು ಗೌರವಿಸುತ್ತೇವೆ ಮತ್ತು ಅವರೊಂದಿಗೆ ಸಮಾಲೋಚನೆಯಿಲ್ಲದೆ ಹೇಳಿಕೆ ನೀಡಲು ಬಯಸುವುದಿಲ್ಲ. ಬಹಳ ಸೂಕ್ಷ್ಮವಾದ ಮಾರ್ಗವಿದೆ, ಮೈತ್ರಿ ಏನು ಒಪ್ಪುತ್ತದೆ ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ಹೇಳಿದರು.



Read More
Next Story