ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ, ನಮಗೆ ಸಮಾಧಾನ ತಂದಿಲ್ಲ: ಸಿಟಿ ರವಿ

ಎನ್ ಡಿಎ ಅಧಿಕಾರಕ್ಕೆ ಬರಲಿದ್ದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಫಲಿತಾಂಶ ನಮ್ಮ ನಿರೀಕ್ಷೆಯಂತೆ ಬಂದಿಲ್ಲ, ಒಟ್ಟಾರೆ ಫಲಿತಾಂಶ ಬಂದ ನಂತರ ಚರ್ಚೆ ನಡೆಸಲಿದ್ದೇವೆ. ನಮಗೆ ಸಮಾಧಾನ ತಂದಿಲ್ಲ ಪೂರ್ಣ ಫಲಿತಾಂಶದ ನಂತರ ಈ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದು ಬಿಜೆಪಿ ಮುಖಂಡ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಸ್ಪಷ್ಟ ಬಹುಮತ ಎನ್ ಡಿಎ ಗೆ ಇದೆ. ಅಜೆಂಡಾ ಇಟ್ಟುಕೊಂಡು ನಾವು ಚುನಾವಣೆ ಎದುರಿಸಿದ್ದೇವೆ. ಈಗಿನ ಫಲಿತಾಂಶ ನಾವು ನಿರೀಕ್ಷೆ ಮಾಡಿದಷ್ಟು ಬಂದಿಲ್ಲ. 16, 18 ಕರ್ನಾಟಕದಲ್ಲಿ ಸಾಮಾನ್ಯವಾಗಿ ಬಿಜೆಪಿ ಗಳಿಸುತ್ತಿರುವ ಸ್ಥಾನಗಳು ಪೂರ್ಣ ಫಲಿತಾಂಶದ ನಂತರ ಸ್ಪಷ್ಟತೆ ಸಿಗಲಿದೆ. ಮ್ಯಾಜೀಕ್ ನಂಬರ್ ತಲುಪಿದ್ದೇವೆ. ಅಪಪ್ರಚಾರ, ಜಾತಿ ವಿಭಜನೆ ಮಾಡುವುದು ಹೆಚ್ಚಾಗಿರಬಹುದು ಚರ್ಚಿಸುತ್ತೇವೆ. ಜೆಡಿಯು ಈಗಾಗಲೇ ಸ್ಪಷ್ಟನೆ ನೀಡಿದೆ. ಯಾರ ಮೇಲೂ ಅನುಮಾನ ಪಡಲು ಸಾಧ್ಯವಿಲ್ಲ. ಬೆಂ.ಗ್ರಾಮಾಂತರದಲ್ಲಿ ಜನ ಬಲ ಗೆದಿದ್ದೆ. ಕಾಂಗ್ರೆಸ್ ನವರು ಸೀರೆ ಹಾಗೂ ಹಣ ಹಂಚಿದರು ಆದರೆ, ಜನ ಬಿಜೆಪಿಯನ್ನು ಬೆಂಬಲಿಸಿದ್ದಾರೆ‌. ಮತ್ತೊಮ್ಮೆ ಮೋದಿ ಎನ್ನುವುದಕ್ಕೆ ಜನ ಮನ್ನಣೆ ಸಿಕ್ಕಿದೆʼʼ ಎಂದು ಹೇಳಿದ್ದಾರೆ.


Read More
Next Story