ಜನಸಂದಣಿ ನಿಯಂತ್ರಣ ವಿಧೇಯಕ ಪರಿಶೀಲನೆಗೆ ಸದನ ಸಮಿತಿ ರಚನೆ: ಸ್ಪೀಕರ್‌


ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ಜನಸಂದಣಿ ನಿಯಂತ್ರಣ ವಿಧೇಯಕಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ವಿಧೇಯಕದ ಪರಿಶೀಲನೆ ಹಾಗೂ ಕರ್ನಾಟಕ ಭೂಕಂದಾಯ ಎರಡನೇ ತಿದ್ದುಪಡಿ ವಿಧೇಯಕದಡಿಯಲ್ಲಿ ಕೊಡಗಿನಲ್ಲಿ ಜಾರಿಯಲ್ಲಿರುವ 'ಜಮ್ಮಾ ಬಾಣೆ' ಭೂ ಹಿಡುವಳಿಯಡಿ ಭೂಹಕ್ಕು ಬದಲಾವಣೆ, ನೋಂದಣಿ, ವಾರಸು, ಉತ್ತರಾಧಿಕಾರ, ಪರಭಾರೆಗಳನ್ನು ಸರಳೀಕರಣ ಮಾಡಲು ತಂದಿರುವ ವಿಧೇಯಕದಲ್ಲಿ ಸಾಕಷ್ಟು ಜಟಿಲತೆ ಇರುವ ಕಾರಣ  ಸದನ ಸಮಿತಿ ರಚಿಸುವುದಾಗಿ ಸ್ಪೀಕರ್ ಯು.ಟಿ. ಖಾದರ್‌ ತಿಳಿಸಿದರು. 

ವಿಧೇಯಕ ವಿರೋಧಿಸಿ ಸದನ ಸಮಿತಿ ರಚಿಸುವಂತೆ ಬಿಜೆಪಿ-ಜೆಡಿಎಸ್ ಒಗ್ಗೂಡಿ ಒತ್ತಾಯಿಸಿದ್ದವು.

 

Read More
Next Story