ಯಾವುದೇ ತೀರ್ಮಾನ ಆಗದೇ ಯಾಕೆ ಅವರು ವಿರೋಧ ಮಾಡುತ್ತಾರೆ?


ಜಾತಿಗಣತಿ ವರದಿಗೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಂದ ಬಂದಿರುವ ವಿರೋಧದ ಕುರಿತಂತೆ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, "ಜಾತಿಗಣತಿ ಬಗ್ಗೆ ಈಗಾಗಲೇ ಯಾವುದೇ ನಿರ್ಧಾರವಾಗಿಲ್ಲ. ಯಾವುದೇ ತೀರ್ಮಾನ ಆಗದೇ ಯಾಕೆ ಅವರು ವಿರೋಧ ಮಾಡುತ್ತಾರೆ. ತೀರ್ಮಾನ ಆದ ಮೇಲೆ ವಿರೋಧ ಮಾಡಬೇಕು ತಾನೆ? ಇವತ್ತು ನಮ್ಮ ಕ್ಯಾಬಿನೆಟ್ ಸಭೆ ಇದೆ. ಅದರಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. 

Read More
Next Story