ಸಿಎಂ ಆಪ್ತ ಗೋವಿಂದರಾಜು ವಿರುದ್ಧ ಎಚ್​ಡಿಕೆ ಗಂಭೀರ ಆರೋಪ


 

ಆರ್‌ಸಿಬಿ ವಿಜಯೋತ್ಸವ ಸಮಾರಂಭದ ಕಾಲ್ತುಳಿತ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ 24 ಗಂಟೆಯೂ ಇರುವ ಅವರ ರಾಜಕೀಯ ಕಾರ್ಯದರ್ಶೀ ಗೋವಿಂದರಾಜು ಕೂಡ ಕಾರಣ ಎಂಬುದಾಗಿ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ವಿಧಾನಸೌಧದ ಮುಂದೆ ಕಾರ್ಯಕ್ರಮ ಆಯೋಜಿಸಲು ಪೊಲೀಸ್ ಕಮಿಷನರ್ ಅನುಮತಿ ನಿರಾಕರಿಸಿದಾಗ, ಗೋವಿಂದರಾಜು ಅವರು ಮುಖ್ಯಮಂತ್ರಿಗಳ ಮೂಲಕವೇ ಒತ್ತಡ ಹೇರಿ ಅನುಮತಿ ಪಡೆದಿದ್ದಾರೆ ಎಂದು ಜೆಡಿಎಸ್​ ಮುಖಂಡ ಆರೋಪಿಸಿದ್ದಾರೆ.

"ಸಿಎಂ ಜೊತೆಯಲ್ಲಿ 24 ಗಂಟೆ ಭದ್ರತಾ ಸಿಬ್ಬಂದಿ ಇರುತ್ತಾರೆ. ಅದರ ಜೊತೆಗೆ 24 ಗಂಟೆ 'ಗೋವಿಂದಾ ಗೋವಿಂದಾ' ಎನ್ನುವ ವ್ಯಕ್ತಿ ಇರುತ್ತಾರೆ," ಎಂದು ಎಂಎಲ್‌ಸಿ ಗೋವಿಂದರಾಜು ಅವರನ್ನು ಪರೋಕ್ಷವಾಗಿ ಎಚ್​ಡಿಕೆ ಉಲ್ಲೇಖಿಸಿದರು.

Read More
Next Story