ಸಿಎಂ ಆಪ್ತ ಗೋವಿಂದರಾಜು ವಿರುದ್ಧ ಎಚ್ಡಿಕೆ ಗಂಭೀರ ಆರೋಪ

ಆರ್ಸಿಬಿ ವಿಜಯೋತ್ಸವ ಸಮಾರಂಭದ ಕಾಲ್ತುಳಿತ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ 24 ಗಂಟೆಯೂ ಇರುವ ಅವರ ರಾಜಕೀಯ ಕಾರ್ಯದರ್ಶೀ ಗೋವಿಂದರಾಜು ಕೂಡ ಕಾರಣ ಎಂಬುದಾಗಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ವಿಧಾನಸೌಧದ ಮುಂದೆ ಕಾರ್ಯಕ್ರಮ ಆಯೋಜಿಸಲು ಪೊಲೀಸ್ ಕಮಿಷನರ್ ಅನುಮತಿ ನಿರಾಕರಿಸಿದಾಗ, ಗೋವಿಂದರಾಜು ಅವರು ಮುಖ್ಯಮಂತ್ರಿಗಳ ಮೂಲಕವೇ ಒತ್ತಡ ಹೇರಿ ಅನುಮತಿ ಪಡೆದಿದ್ದಾರೆ ಎಂದು ಜೆಡಿಎಸ್ ಮುಖಂಡ ಆರೋಪಿಸಿದ್ದಾರೆ.
"ಸಿಎಂ ಜೊತೆಯಲ್ಲಿ 24 ಗಂಟೆ ಭದ್ರತಾ ಸಿಬ್ಬಂದಿ ಇರುತ್ತಾರೆ. ಅದರ ಜೊತೆಗೆ 24 ಗಂಟೆ 'ಗೋವಿಂದಾ ಗೋವಿಂದಾ' ಎನ್ನುವ ವ್ಯಕ್ತಿ ಇರುತ್ತಾರೆ," ಎಂದು ಎಂಎಲ್ಸಿ ಗೋವಿಂದರಾಜು ಅವರನ್ನು ಪರೋಕ್ಷವಾಗಿ ಎಚ್ಡಿಕೆ ಉಲ್ಲೇಖಿಸಿದರು.
Next Story