ಕಳೇಬರ ಶೋಧ ಸ್ಥಳದಲ್ಲಿ ಆಟೊ ಚಾಲಕರಿಂದ ಖಾಸಗಿ ಭದ್ರತೆ
ನೇತ್ರಾವತಿ ನದಿ ರಸ್ತೆ ಬದಿಯಲ್ಲಿ ಕಳೇಬರ ಶೋಧ ಕಾರ್ಯಾಚರಣೆ ಸ್ಥಳದಲ್ಲಿ ಪೊಲೀಸರು ಬರುವ ಮುಂಚೆಯೇ ಡಿ-ಗ್ಯಾಂಗ್ ಎಂದು ಹೇಳಿಕೊಂಡ ಆಟೋ ಚಾಲಕರ ಗುಂಪು ಸುತ್ತುವರಿದಿದ್ದ ಪ್ರಸಂಗ ಶನಿವಾರ ನಡೆದಿದೆ. ಸ್ಥಳಕ್ಕೆ ಪೊಲೀಸರು ಬಂದ ಬಳಿಕ ಆಟೊ ಚಾಲಕರನ್ನು ಚದುರಿಸಲಾಯಿತು.
ಪೊಲೀಸರನ್ನು ಹೊರತುಪಡಿಸಿ ಇನ್ನಾರು ಇರುವಂತಿಲ್ಲ ಎಂದು ಸೂಚಿಸಲಾಯಿತು. ಒಂದು ಅಸ್ಥಿಪಂಜರ ಸಿಕ್ಕ ಬಳಿಕ ಮತ್ತೆ ಸಿಗಬಹುದೇ ಎಂಬ ಅನುಮಾನದ ಮೇರೆಗೆ ಬಂದು ವೀಕ್ಷಣೆ ಮಾಡುತ್ತಿದ್ದು, ಮಾಹಿತಿ ರವಾನೆಗಾಗಿ ಗ್ಯಾಂಗ್ ಸ್ಥಳಕ್ಕೆ ಬಂದಿತ್ತು ಎಂದು ಸ್ಥಳೀಯ ಮೂಲಗಳು ಹೇಳಿವೆ.

Next Story