ಹೋರಾಟ ದೇವಸ್ಥಾನದ ವಿರುದ್ಧವಲ್ಲ: ಗಿರೀಶ್ ಮಟ್ಟಣ್ಣನವರ್ ಸ್ಪಷ್ಟನೆ

ಹೋರಾಟ ನಡೆಸುತ್ತಿರುವುದು ಧರ್ಮಸ್ಥಳದ ದೇವಸ್ಥಾನದ ವಿರುದ್ಧವಲ್ಲ. ಧರ್ಮಾಧಿಕಾರಿ ಹೆಸರು ಹೇಳದೆ ಹೋರಾಟಮಾಡುವುದು ಹೇಗೆ. ಹೋರಾಟ ಮಾಡುವುದನ್ನೇ ಷಡ್ಯಂತ್ರ ಎಂದು ಬಿಂಬಿಸಲಾಗುತ್ತಿದೆ ಎಂದು ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ತಿಳಿಸಿದರು.

ಹೋರಾಟ ಮಾಡುವವರಲ್ಲೇ ಅನೇಕರು ದೇವಸ್ಥಾನದ ಭಕ್ತರಾಗಿದ್ದು, ನೇತ್ರಾವತಿ ನದಿಯಲ್ಲಿ ತೇಲಾಡಿ ಬಂದವರೇ ಆಗಿದ್ದಾರೆ. ಸೌಜನ್ಯ ಕೊಲೆ ಪ್ರಕರಣದಲ್ಲಿ ಮೊದಲು ಸೌಜನ್ಯ ಚಿಕ್ಕಪ್ಪನಿಂದ ದೂರು ಪಡೆದುಕೊಂಡಿದ್ದರು. ಇದು ಮೊದಲ ಷಡ್ಯಂತ್ರವಾಗಿದೆ. ಸೌಜನ್ಯ ತಾಯಿಯನ್ನು ಪ್ರಕರಣದ ಆರಂಭದಲ್ಲಿ ದೂರವಿಟ್ಟಿದ್ದರು. ಇದು ಮತ್ತೊಂದು ಷಡ್ಯಂತ್ರ. ಸಂತೋಷ್ ರಾವ್‌ರನ್ನು ಪೊಲೀಸರು ಬಂಧನವೇ ಮಾಡಿಲ್ಲ. ಅತ್ಯಾಚಾರಿ, ಕೊಲೆಗಡುಕರನ್ನು ರಕ್ಷಿಸುವ ಷಡ್ಯಂತ್ರ ನಡೆದಿದೆ ಎಂದು ತಿಳಿಸಿದರು.

 

Read More
Next Story