ಸಂಸ್ಕೃತಿ ದ್ವೇಷಕ್ಕೆ ಜಾಗವಲ್ಲ, ಪ್ರೀತಿಯನ್ನು ಹರಡುವ ಗುರಿ ಹೊಂದಿದೆ: ಬಾನು ಮುಷ್ತಾಕ್

ಮೈಸೂರು ದಸರಾ ಶಾಂತಿಯ ಹಬ್ಬವಾಗಿದ್ದು, ಇದು ಎಲ್ಲರ ಕಿವಿಯಲ್ಲಿ ಪ್ರತಿಧ್ವನಿಸಲಿ ಎಂದು ಬಾನು ಮುಷ್ತಾಕ್ ತಿಳಿಸಿದರು.

ಸಂಸ್ಕೃತಿ ಎಂದರೆ ಹೃದಯಗಳನ್ನು ಒಟ್ಟುಗೂಡಿಸುವ ಸೇತುವೆ, ಅದು ದ್ವೇಷವನ್ನು ಬೆಳೆಸುವುದಲ್ಲ, ಪ್ರೀತಿಯನ್ನು ಹರಡುವುದೇ ಅದರ ಗುರಿ. ನನ್ನ ಧಾರ್ಮಿಕ ನಂಬಿಕೆಗಳು ಮತ್ತು ಜೀವನ ಪಾಠಗಳು ಯಾವತ್ತೂ ಯಾವುದೇ ಗಡಿಯನ್ನು ದಾಟಲಿಲ್ಲ. ಅವು ಯಾವಾಗಲೂ ಪ್ರಾಣಿ ಮತ್ತು ಮನುಷ್ಯರನ್ನು ನೋಯಿಸದ ಜೀವಪರ ಮಾನವೀಯ ದರ್ಶನವನ್ನು ಬೆಳೆಸಿವೆ. ಈ ನೆಲದ ಸಂಸ್ಕೃತಿ ನನಗೆ ಕಲಿಸಿರುವ ಪಾಠ ಅಂದರೆ ಎಲ್ಲರನ್ನು ಒಳಗೊಳ್ಳುವ ಮನಸ್ಸು ಮತ್ತು ಎಲ್ಲರ ಬದುಕನ್ನು ಗೌರವಿಸುವ ಹೃದಯ. ಇಂದು ಇಡೀ ಜಗತ್ತು ಯುದ್ಧದ ಹಾದಿಯಲ್ಲಿ ನಡೆಯುತ್ತಿರುವಾಗ, ಮನುಕುಲವು ದ್ವೇಷ ಮತ್ತು ರಕ್ತಪಾತದಲ್ಲಿ ಮುಳುಗುತ್ತಿರುವಾಗ, ಮೈಸೂರು ದಸರಾ ಶಾಂತಿಯ ಹಬ್ಬ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಈ ಸಂದೇಶವು ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿ ಎಂದು ಬಾನು ಮುಷ್ತಾಕ್ ಆಶಿಸಿದರು. 

Read More
Next Story