ವಂಚನೆ ನಡೆದರೆ ನೇಪಾಳ ಮಾದರಿ ಹಿಂಸಾಚಾರ ; ಆರ್​ಜೆಡಿ ಎಂಎಲ್​ಸಿ ಎಚ್ಚರಿಕೆ
x

ವಂಚನೆ ನಡೆದರೆ ನೇಪಾಳ ಮಾದರಿ ಹಿಂಸಾಚಾರ ; ಆರ್​ಜೆಡಿ ಎಂಎಲ್​ಸಿ ಎಚ್ಚರಿಕೆ

ಬಿಹಾರ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳಿಂದ ಆತಂಕಗೊಂಡಿರುವ ಇಂಡಿಯಾ ಕೂಟದ ಪಕ್ಷಗಳು ಕಟ್ಟುನಿಟ್ಟಿನ ಹಾಗೂ ಪಾರದರ್ಶಕ ಮತ ಎಣಿಕೆಗೆ ಆಗ್ರಹಿಸಿವೆ.

ಆರ್‌ಜೆಡಿಯ ವಿಧಾನ ಪರಿಷತ್ ಸದಸ್ಯ ಸುನಿಲ್ ಸಿಂಗ್ ಪ್ರತಿಕ್ರಿಯಿಸಿ, “ ಚುನಾವಣೆಯಲ್ಲಿ ವಂಚನೆ ನಡೆದರೆ ಬಿಹಾರವು ಮತ್ತೊಂದು ನೇಪಾಳ ಅಥವಾ ಬಾಂಗ್ಲಾದೇಶವಾಗಿ ಬದಲಾಗುತ್ತದೆ. ಸಾಮಾನ್ಯ ಜನರು ಜಾಗರೂಕರಾಗಿರಬೇಕು. ಶೇ. 1ರಷ್ಟು ದುಷ್ಕೃತ್ಯವನ್ನೂ ನಾವು ಸಹಿಸುವುದಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಮನವಿ ಮಾಡುತ್ತೇನೆ. ಮತ ಎಣಿಕೆಯನ್ನು ನ್ಯಾಯಯುತವಾಗಿ ನಡೆಸಿ, ನಿಮ್ಮ ಕರ್ತವ್ಯಗಳನ್ನು ಸಮಗ್ರತೆಯಿಂದ ನಿರ್ವಹಿಸಿ” ಎಂದು ಎಚ್ಚರಿಸಿದ್ದಾರೆ.

Read More
Next Story