ಜಾತಿ ಗಣತಿ ಮರುಸಮೀಕ್ಷೆ, ಸಚಿವರಿಂದ ಪರ - ವಿರೋಧ ಚರ್ಚೆ

ಮರು ಜಾತಿ ಜನಗಣತಿ ಅವಶ್ಯಕತೆಯಿಲ್ಲ ಅಂಕಿ ಅಂಶಗಳಲ್ಲಿ ವ್ಯತ್ಯಾಸವಿದ್ದರೆ ಸರಿಪಡಿಸಿ. ಆದರೆ ಮರು ಸಮೀಕ್ಷೆ ಬೇಡ ಎಂದು ಅಹಿಂದ ವರ್ಗದ ಸಚಿವರು ವಿಶೇಷ ಸಂಪುಟ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ಜಾತಿ ಗಣತಿ ಕುರಿತು ಈಗಾಗಲೇ ಎರಡೂ ಸಮಾಜಗಳು ಆತಂಕಗೊಂಡಿವೆ. ಆದ್ದರಿಂದ ಮರು ಜಾತಿ ಗಣತಿ ಅವಶ್ಯಕ ಎಂದ ತಿಳಿಸಿದ್ದಾರೆ.
ಈಗಾಗಲೇ ಹೈಕಮಾಂಡ್ ನಾಯಕರು ಸೂಚನೆ ನೀಡಿದ್ದಾರೆ. ಅದರಂತೆ ನಾವು ತೀರ್ಮಾನ ಮಾಡೋಣ. ಯಾವ ಸಮಾಜಕ್ಕೂ ಅನ್ಯಾಯವಾಗದಂತೆ ತೀರ್ಮಾನ ಮಾಡಿ ಎಂದು ಕೆಲವು ಸಚಿವರು ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ.
Next Story