ಮಠಾಧೀಶರು, ಸಂಘ ಸಂಸ್ಥೆಗಳು ವಿರೋಧಿಸಿದ್ದರಿಂದ ಮರು ಸಮೀಕ್ಷೆ: ಸಚಿವ ಸತೀಶ್‌ ಜಾರಕಿಹೊಳಿ


 

ಜಾತಿಗಣತಿ ವರದಿ ಸರಿಯಾಗಿದೆ ಆದರೆ ಕೆಲವು ಗೊಂದಲಗಳಿರುವುದರಿಂದ ಮತ್ತೊಮ್ಮೆ ಎಲ್ಲರ ಅಭಿಪ್ರಾಯ ಪಡೆಯಲು ಸಂಪುಟ ಸಭೆ ಕರೆಯಲಾಗಿದೆ. ವರದಿಯನ್ನು ಸಾರ್ವಜನಿಕವಾಗಿ ತೆರೆದಿಡುವ ಕೆಲಸ ಮಾಡಲಾಗುವುದು. ಅಂಕಿ ಅಂಶಗಳನ್ನು ವೆಬ್ ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ ವ್ಯತ್ಯಾಸ ಇದ್ದರೆ ಪ್ರಶ್ನೆ ಮಾಡಬಹುದು, ಪರಿಷ್ಕರಣೆಯೂ ಆಗಬಹುದು. ಮರುಸರ್ವೇ ಮಾಡಿದರೂ ತೊಂದರೆ ಇಲ್ಲ. ಜಾತಿ ಗಣತಿ ವಿಚಾರದಲ್ಲಿ ಜನರನ್ನ ಗೊಂದಲದಲ್ಲಿ ಇಡುವುದು ಸರಿಯಲ್ಲ. ಸಮೀಕ್ಷೆ ಕುರಿತು ವಿವಿಧ ಮಠಾಧೀಶರು, ಸಂಘ ಸಂಸ್ಥೆಗಳು ವಿರೋಧ ಮಾಡಿದ್ದಾರೆ. ಆದ್ದರಿಂದ ಮರು ಸಮೀಕ್ಷೆ ಮಾಡಬೇಕಾಗುತ್ತದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ. 

Read More
Next Story