ಆರ್‌ಸಿಬಿ ವಿಜಯೋತ್ಸವಕ್ಕೆ ಸುಮಾರು 15 ಕೋಟಿ ರೂ. ಖರ್ಚು ?


 

 

ಆರ್‌ಸಿಬಿ ಆಟಗಾರರನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನಿಸಲು ಹಾಗೂ ಕ್ರೀಡಾಂಗಣದ ಬಳಿ ವಿಜಯೋತ್ಸವ ಆಚರಿಸಲು ಅಂದಾಜು 15 ಕೋಟಿ ರೂ. ಖರ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ಐಪಿಎಲ್‌ ಇವೆಂಟ್‌ ಮ್ಯಾನೆಜ್‌ಮೆಂಟ್‌ ಜವಾಬ್ದಾರಿ ಹೊಂದಿದ್ದ ಡಿಎನ್‌ಎ ಸಂಸ್ಥೆ ವಿಜಯೋತ್ಸವದ ಉಸ್ತುವಾರಿ ವಹಿಸಿಕೊಂಡಿತ್ತು. ಕಾರ್ಯಕ್ರಮವನ್ನು ಬುಧವಾರ(ಜೂನ್‌.4) ಬಿಟ್ಟು ಶನಿವಾರ ಮಾಡಬೇಕು ಎಂದು ನಿರ್ಧಿರಿಸಲಾಗಿತ್ತು. ಆದರೆ ಕೆಲವು ಸಚಿವರು ಹಾಗೂ ಅಧಿಕಾರಿಗಳ ಒತ್ತಡದಿಂದಾಗಿ ಬುಧವಾರವೇ ಕಾರ್ಯಕ್ರಮ ಆಯೋಜಿಸಿದ್ದರಿಂದ ಅಭಿಮಾನಿಗಳನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಯೋಚಿಸುವಲ್ಲಿ ಸರ್ಕಾರ ಹಾಗೂ ಡಿಎನ್‌ಎ ಸಂಸ್ಥೆ ಎಡವಿದೆ ಎನ್ನಲಾಗಿದೆ. 

Read More
Next Story