ಗಡಿಯಾಚೆಗಿನ ಗುರಿಗಳ ಮೇಲಿನ ದಾಳಿಗೆ ನ್ಯಾಯ ಸಿಕ್ಕಿದೆ: ಪಳನಿಸ್ವಾಮಿ

ಬುಧವಾರ (ಮೇ 7) ಪಾಕಿಸ್ತಾನದಲ್ಲಿ ಭಯೋತ್ಪಾದಕ ಗುರಿಗಳ ಮೇಲಿನ ದಾಳಿಯನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪಪಾಡಿ ಕೆ ಪಳನಿಸ್ವಾಮಿ ಶ್ಲಾಘಿಸಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಜಾಗರೂಕ ನಾಯಕತ್ವದಲ್ಲಿ ನ್ಯಾಯ ದೊರಕಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಪಳನಿಸ್ವಾಮಿ ಹೀಗೆ ಹೇಳಿದ್ದಾರೆ: "ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಮತ್ತು ಪಿಒಜೆಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಅನ್ನು ನಿಖರವಾಗಿ ಕಾರ್ಯಗತಗೊಳಿಸಿದ್ದಕ್ಕಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ನಾನು ಶ್ಲಾಘಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಜಾಗರೂಕ ನಾಯಕತ್ವದಲ್ಲಿ ನ್ಯಾಯ ದೊರಕಿದೆ ಎಂದು ಅವರು ಪೋಸ್ಟ್‌ ಮಾಡಿದ್ದಾರೆ. 

Update: 2025-05-07 07:36 GMT

Linked news