ಪೋಸ್ಟ್​ ಎಡಿಟ್​ ಮಾಡಿದ ಎಲ್​ಜಿ! ದೆಹಲಿಯ ಲೆಫ್ಟಿನೆಂಟ್... ... Maha Kumbh 2025 : ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ, ಐವರು ಮಕ್ಕಳು ಸೇರಿ 18 ಭಕ್ತರ ಸಾವು

ಪೋಸ್ಟ್​ ಎಡಿಟ್​ ಮಾಡಿದ ಎಲ್​ಜಿ!

ದೆಹಲಿಯ ಲೆಫ್ಟಿನೆಂಟ್ ಜನರಲ್​ ಸಕ್ಸೇನಾ ಸಾವು ಸಂಭವಿಸಿದೆ ಎಂದು ಪೋಸ್ಟ್​ ಮಾಡಿ, ಸಂತಾಪ ಸೂಚಿಸಿದ್ದರು. ಬಳಿಕ ಅದನ್ನು ಅವರು ಎಡಿಟ್ ಮಾಡಿದರು. ಸಾವು ಆಗಿದೆ ಎಂಬ ತಮ್ಮ ಹೇಳಿಕೆಯನ್ನು ತಿದ್ದುಪಡಿ ಮಾಡಿದರು.

ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಉಂಟಾಗಿರುವ ಅವ್ಯವಸ್ಥೆ ಮತ್ತು ಕಾಲ್ತುಳಿತ ದಿಂದಾಗಿ ಉಂಟಾಗಿರುವ ಗಾಯಗಳು ಮತ್ತು ಪ್ರಾಣ ಹಾನಿ ದುರದೃಷ್ಟಕರ. ಈ ದುರಂತದಲ್ಲಿ ಬಲಿಯಾದವರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಮೊದಲು ಬರೆದಿದ್ದರು. 15 ನಿಮಿಷಗಳ ನಂತರ, ಸಕ್ಸೇನಾ ಸಾವಿನ ಉಲ್ಲೇಖ ತೆಗೆದು ಹಾಕಿದ್ದಾರೆ.

ರಾಜನಾಥ್ ಸಿಂಗ್ ಟ್ವೀಟ್​

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಸಾವುಗಳಿಂದ ತಮಗೆ ನೋವಾಗಿದೆ ಎಂದು ಹೇಳಿದ್ದಾರೆ.

"ನವದೆಹಲಿ ರೈಲ್ವೆ ನಿಲ್ದಾಣದಿಂದ ಆಘಾತಕಾರಿ ಸುದ್ದಿ ಬಂದಿದೆ. ರೈಲ್ವೆ ಪ್ಲಾಟ್ ಫಾರ್ಮ್​​ನಲ್ಲಿ ಕಾಲ್ತುಳಿತದಿಂದಾಗಿ ಪ್ರಾಣಹಾನಿಯಾಗಿರುವುದು ನನಗೆ ತುಂಬಾ ನೋವುಂಟು ಮಾಡಿದೆ. ಎಂದು ಬರೆದುಕೊಂಡಿದ್ದಾರೆ. 

Update: 2025-02-16 04:42 GMT

Linked news