ಹಿಂದಿನಿಂದ ತಳ್ಳಿದ್ದೇ ಘಟನೆ ಕಾರಣ ಪ್ರಯಾಣಿಕ ಧರ್ಮೇಂದ್ರ... ... Maha Kumbh 2025 : ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ, ಐವರು ಮಕ್ಕಳು ಸೇರಿ 18 ಭಕ್ತರ ಸಾವು

ಹಿಂದಿನಿಂದ ತಳ್ಳಿದ್ದೇ ಘಟನೆ ಕಾರಣ

ಪ್ರಯಾಣಿಕ ಧರ್ಮೇಂದ್ರ ಸಿಂಗ್ ಎಂಬುವರು ಘಟನೆ ಬಗ್ಗೆ ವಿವರಿಸಿ "ನಾನು ಪ್ರಯಾಗ್​ರಾಜ್​ಗೆ ಹೋಗುತ್ತಿದ್ದೆ ರೈಲುಗಳು ತಡವಾಗಿ ಬಂದಿದ್ವವು. ಕೆಲವು ರದ್ದಾಗಿದ್ದವು. ಹೀಗಾಗಿ ನಿಲ್ದಾಣ ಜನದಟ್ಟಣೆಯಿಂದ ಕೂಡಿತ್ತು. ಈ ನಿಲ್ದಾಣದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಜನರು ಇದ್ದರು. ನನ್ನ ಮುಂದೆಯೇ ಆರೇಳು ಮಹಿಳೆಯರನ್ನು ಸ್ಟ್ರೆಚರ್ ಮೇಲೆ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ.

ಪ್ರಮೋದ್ ಚೌರಾಸಿಯಾ ಎಂಬುವರು ಮಾತನಾಡಿ, "ನಾನು ಪುರುಷೋತ್ತಮ್ ಎಕ್ಸ್​ಪ್ರೆಸ್​​ನಲ್ಲಿ ಸ್ಲೀಪರ್ ಕ್ಲಾಸ್ ಟಿಕೆಟ್ ತೆಗೆದುಕೊಂಡಿದ್ದೆ. ಆದರೂ ರೈಲು ಹತ್ತಲು ಸಾಧ್ಯವಾಗಲಿಲ್ಲ. ಮಹಿಳಾ ಪ್ರಯಾಣಿಕರು ಜನಸಂದಣಿಯಲ್ಲಿ ಸಿಲುಕಿಕೊಂಡರು. ನೂಕುನುಗ್ಗಲು ಇತ್ತು. ನಾವು ನೂಕಾಟ ನೋಡಿ ಹೆದರಿ ಹೊರಗೆ ಬಂದೆವು. ಹೀಗಾಗಿ ಜೀವ ಉಳಿಯಿತು ಎಂದು ಹೇಳಿದ್ದಾರೆ.

Update: 2025-02-16 04:20 GMT

Linked news