ಮೈಸೂರಿನಲ್ಲಿ ಬಸ್‌ ಇಲ್ಲದೆ​ ಜನರ ಪರದಾಟ

ಮೈಸೂರಿನಲ್ಲಿ ಸಾರಿಗೆ ಮುಷ್ಕರದಿಂದಾಗಿ ಕೆಲಸ-ಕಾರ್ಯಕ್ಕೆ ಹೋಗುವವರು ಕಾದು ನಿಂತಿದ್ದಾರೆ. ತುಮಕೂರು, ನಾಗಮಂಗಲ ಕಡೆ ಹೋಗಲು ಜನರು ಪರದಾಡಿದ್ದಾರೆ. ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಕಾದು ಕುಳಿತಿರುವ ದೃಶ್ಯ ಕಂಡು ಬಂದಿದೆ. ಬೆಂಗಳೂರು, ಗುಂಡ್ಲುಪೇಟೆ ಸೇರಿ ಕೆಲವೆಡೆ ಮಾತ್ರ ಕೆಲವೇ ಬಸ್ ಗಳ ಸಂಚಾರ ಇದೆ. ಊರುಗಳಿಗೆ ತೆರಳಲು ಬಸ್ ಗಳಲ್ಲಿದೆ ಜನರು ಪರದಾಡಿದ್ದಾರೆ. 

Update: 2025-08-05 04:24 GMT

Linked news