2 ದಿನಗಳಿಂದ ನಿದ್ದೆ ಮಾಡಿಲ್ಲ: ರಾಜಸ್ಥಾನದ ಗಡಿ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ

ಶುಕ್ರವಾರ ರಾತ್ರಿ (ಮೇ 9) ಪಾಕಿಸ್ತಾನ ಭಾರತದ ಮೇಲೆ ನಡೆಸಿದ ಡ್ರೋನ್‌ ದಾಳಿಯಿಂದ ರಾಜಸ್ಥಾನದ ಗಡಿ ಪ್ರದೇಶಗಳ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಆದರೆ ಭಾರತೀಯ ಸೇನೆ ಡ್ರೋನ್‌ಗಳನ್ನು ತಟಸ್ಥಗೊಳಿಸಿದ್ದರಿಂದ ಸದ್ಯ ಯಾವುದೇ ಹಾನಿ ಉಂಟಾಗಿಲ್ಲ. 

"ನಮ್ಮ ಪಡೆಗಳು ಡ್ರೋನ್‌ಗಳನ್ನು ಆಕಾಶದಲ್ಲೇ ನಾಶಪಡಿಸಿದ ರೀತಿ ಪಾಕಿಸ್ತಾನದ ದಾಳಿಗಳು ನಮಗೆ ಹಾನಿ ಮಾಡುವುದಿಲ್ಲ ಎಂಬ ವಿಶ್ವಾಸವನ್ನು ಹೆಚ್ಚಿಸಿದೆ" ಎಂದು ಜೈಸಲ್ಮೇರ್ ನಿವಾಸಿ ಜಲಮ್ ಸಿಂಗ್ ತಿಳಿಸಿದ್ದಾರೆ. 

ಪಶ್ಚಿಮ ರಾಜಸ್ಥಾನದಲ್ಲಿ ಸಂಪೂರ್ಣವಾಗಿ ವಿದ್ಯುತ್‌ ಕಡಿತಗೊಳಿಸಿದ್ದರಿಂದ ಅಲ್ಲಿನ ನಿವಾಸಿಗಳನ್ನು ಎಚ್ಚರಿಸಲು ಹಲವಾರು ಸೈರನ್‌ಗಳನ್ನು ಮೊಳಗಿಸಿತು. ಶುಕ್ರವಾರ ರಾತ್ರಿ ಜೈಸಲ್ಮೇರ್‌ನ ಪೋಖ್ರಾನ್‌ನಲ್ಲಿ ಮೊದಲ ಡ್ರೋನ್ ದಾಳಿಯ ಪ್ರಯತ್ನ ಸಂಭವಿಸಿದೆ. ನಂತರ ಜೈಸಲ್ಮೇರ್ ಮತ್ತು ಬಾರ್ಮರ್‌ನ ಇತರ ಪ್ರದೇಶಗಳಿಂದಲೂ ಇದೇ ರೀತಿಯ ಪ್ರಯತ್ನಗಳು ವರದಿಯಾಗಿವೆ.

ಆದರೂ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಡ್ರೋನ್‌ಗಳನ್ನು ಆಕಾಶದಲ್ಲೇ ಯಶಸ್ವಿಯಾಗಿ ತಟಸ್ಥಗೊಳಿಸಿತು, ಯಾವುದೇ ಹಾನಿ ವರದಿಯಾಗಿಲ್ಲ, ಇದು ಸ್ಥಳೀಯ ಜನರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬಿದೆ.

Update: 2025-05-10 05:31 GMT

Linked news