ಕಾಂಗ್ರೆಸ್ ಹೈಕಮಾಂಡ್ಗೆ ಲೂಟಿ ಮಾಡುವುದಷ್ಟೇ ಗೊತ್ತು: ಎಚ್ಡಿಕೆ ಆರೋಪ
ಆಸ್ಪತ್ರೆಯಲ್ಲಿ ಗಾಯಾಳುಗಳಿದ್ದು, ಸಾವು ನೋವು ಸಂಭವಿಸುತ್ತಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಾರ್ಧನಹೊಟೇಲ್ ನಲ್ಲಿ ಸಿಹಿ ತಿಂಡಿ ತಿನ್ನುತ್ತಿದ್ದರು. ಘಟನೆಗೆ ಅಧಿಕಾರಿಗಳ ತಪ್ಪು ಏನಿಲ್ಲ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಮೊದಲು ಅವರನ್ನು ಹೊರಗೆಹಾಕಬೇಕು. ಸರ್ಕಾರದ ತನಿಖೆಯಿಂದ ಸತ್ಯಾಂಶ ಹೊರ ಬರುವುದಿಲ್ಲ. ಸರ್ಕಾರದಲ್ಲಿಎರಡೂವರೆ ವರ್ಷದ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಗೆ ಏನಾದರು ಮನುಷ್ಯತ್ವ ಇದ್ದರೆ ಸಿದ್ದರಾಮಯ್ಯ ಹಾಗು ಡಿಕೆಶಿ ಇಬ್ಬರನ್ನು ಹೊರಗೆ ಹಾಕಿ ಹೊಸಬರನ್ನು ಸಿಎಂ ಮಾಡಬೇಕು. ಇಂತಹ ಕೆಟ್ಟ ಆಡಳಿತ ಎಂದೂ ನೋಡಿಲ್ಲ ಎಂದು ಸಚಿವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಎರಡು ದೊಡ್ಡ ಖಾತೆ ನೀಡಿದ್ದಾರೆ. ನನಗೆ ಅಧಿಕಾರ ಇದೆ. ಎಚ್ಎಂಟಿ ಪುನಶ್ಚೇತನ ಮಾಡುತ್ತೇನೆ, ಶಿವಮೊಗ್ಗದ ವಿಐಎಸ್ಎಲ್ಗೂ ಡಿಪಿಆರ್ ಸಿದ್ದಮಾಡುತ್ತಿದ್ದೇನೆ ಎಂದು ಎಚ್ಡಿಕೆ ತಿಳಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಮನುಷ್ಯತ್ವಕ್ಕಾದರೂ ಕನಿಕರದ ಮಾತನಾಡಿಲ್ಲ. ಹೈಕಮಾಂಡ್ಗೆ ರಾಜ್ಯದಿಂದ ಲೂಟಿ ಮಾಡುವುದು ಅಷ್ಟೆ ಗೊತ್ತು. ರಾಜ್ಯದ ಗೃಹ ಸಚಿವ ಪರಮೇಶ್ವರ್ ಕೀಲುಕುದುರೆ ಇದ್ದ ಹಾಗೆ ಎಂದು ತಿಳಿಸಿದ್ದಾರೆ.