ಪೊಲೀಸ್ ಅಧಿಕಾರಿಗಳ ಅಮಾನತು ನಾಟಕ, ಕುಮಾರಸ್ವಾಮಿ ಪರೋಕ್ಷ ಟೀಕೆ
ಆರ್ಸಿಬಿ ವಿಜಯೋತ್ಸವ ಸಮಾರಂಭದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ಸರ್ಕಾರದ ಕ್ರಮದ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತೊಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಅಮಾನತುಗಳು ತಾತ್ಕಾಲಿಕವಾಗಿದ್ದು, ನಂತರ ಪರಿಸ್ಥಿತಿ ಸರಿಪಡಿಸುವ ಭರವಸೆಯನ್ನು ಸರ್ಕಾರ ನೀಡಿರಬಹುದು ಎಂದು ಅವರು ಪರೋಕ್ಷವಾಗಿ ಸೂಚಿಸಿದ್ದಾರೆ.
"ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ, ನಂತರ ಸ್ವಲ್ಪ ದಿನ ಸುಮ್ಮನಿರಿ, ಆಮೇಲೆ ಎಲ್ಲಾ ಸರಿಮಾಡುತ್ತೇವೆ ಅಂತಾ ಹೇಳಿರುತ್ತಾರೆ" ಎಂದಿರುವ ಕೇಂದ್ರ ಸಚಿವರು, ಸರ್ಕಾರದ ವಿರುದ್ಧದ ವಿರೋಧವನ್ನು ತಣ್ಣಗಾಗಿಸಲು ಮತ್ತು ಸಾರ್ವಜನಿಕ ಆಕ್ರೋಶ ಕಡಿಮೆ ಮಾಡಲು ಅಮಾನತು ನಾಟಕ ಮಾಡಲಾಗಿದೆ ಎಂದು ಹೇಳಿದರು. ಅಮಾನತುಗೊಂಡ ಅಧಿಕಾರಿಗಳನ್ನು ನಂತರ ಹುದ್ದೆಗೆ ಕರೆಸಬಹುದು ಅಥವಾ ಬೇರೆ ರೀತಿಯಲ್ಲಿ ಅವರಿಗೆ ಅನುಕೂಲ ಮಾಡಿಕೊಡಬಹುದು ಎಂದು ಕುಮಾರಸ್ವಾಮಿ ಅವರ ಹೇಳಿಕೆಯ ಒಳಹು.
Update: 2025-06-06 06:35 GMT