ಕಾಲ್ತುಳಿತ ದುರಂತಕ್ಕೆ ಸರ್ಕಾರವೇ ಕಾರಣ: ಪೊಲೀಸ್ ಅಧಿಕಾರಿಗಳ ಅಮಾನತು 'ತಪ್ಪು ಮುಚ್ಚಿಹಾಕುವ ಯತ್ನ' - ಹೆಚ್.ಡಿ. ಕುಮಾರಸ್ವಾಮಿ

 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಆರ್‌ಸಿಬಿ ವಿಜಯೋತ್ಸವ ಸಮಾರಂಭದ ಕಾಲ್ತುಳಿತ ದುರಂತಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಸರ್ಕಾರವು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.

"ಕಾಲ್ತುಳಿತ ದುರಂತಕ್ಕೆ ನೇರವಾಗಿ ಸರ್ಕಾರವೇ ಕಾರಣ. ಸರ್ಕಾರದ ತಪ್ಪುಗಳನ್ನು ಮುಚ್ಚಿಹಾಕಲು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಪೊಲೀಸ್ ಕಮಿಷನರ್ ಬಿ. ದಯಾನಂದ ಅವರ ಕಾರ್ಯಕ್ಷಮತೆಯನ್ನು ಹೊಗಳಿದ ಕುಮಾರಸ್ವಾಮಿ, "ದಯಾನಂದ ಅವರು ಹೊಸ ವರ್ಷಾಚರಣೆ ವೇಳೆಯೂ ಪೊಲೀಸ್ ಕಮಿಷನರ್ ಆಗಿದ್ದರು. ಆ ಸಮಯದಲ್ಲಿ ಎಲ್ಲಿಯೂ ಸಣ್ಣ ಘಟನೆ ಕೂಡ ಆಗಿರಲಿಲ್ಲ" ಎಂದು ಸ್ಮರಿಸಿದ್ದಾರೆ.

ಅಮಾನತಾದ ಡಿಸಿಪಿ ಶೇಖರ್ ಅಪ್ಪಯ್ಯ ಅವರ ಕುರಿತು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರರನ್ನು ಉಲ್ಲೇಖಿಸಿ, "ಅಮಾನತಾದ ಡಿಸಿಪಿ ಶೇಖರ್. ಅಪ್ಪಯ್ಯ ಎಂಬುವರಿಂದ ಅಮಾನತಾಗಿದ್ದಾರೆ. ಸರ್ಕಾರದ ಉನ್ನತ ಮಟ್ಟದಲ್ಲಿರುವವರು ಪೊಲೀಸ್ ಇಲಾಖೆಯ ಅಪ್ಪಯ್ಯ ಎಂದು ಹೇಳುವವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

Update: 2025-06-06 06:32 GMT

Linked news