ಸರ್ಕಾರವೇ ಅಪರಾಧಿ, ನ್ಯಾಯಂಗ ತನಿಖೆಯಾಗಲಿ: ಆರ್. ಆಶೋಕ್
ಕಾಂಗ್ರೆಸ್ ನವರಿಗೆ ಮಾನ ಮರ್ಯಾದೆ ಇಲ್ಲ. ಎಪ್ಐಆರ್ನಲ್ಲಿ ಸಂಭ್ರಮಾಚರಣೆಗೆ ಅನುಮತಿ ಇಲ್ಲದಿದ್ದರೂ ಕಾರ್ಯಕ್ರಮ ಮಾಡಿದ್ದಾರೆ ಎಂದು ಉಲ್ಲೇಖವಾಗಿದೆ. ಸಿಎಂ ಮನೆಗೆ ಪ್ರಾಂಚೈಸಿಯನ್ನು ಕರೆದುಕೊಂಡು ಹೋದವರು ಯಾರು ? ಪ್ರಾಂಚೈಸಿಯವರಿಗೆ ಯಾರು ಏನು ಮಾಡುತ್ತಾರೆ ನಾವು ಇದ್ದೇವೆ ಎಂದು ಸರ್ಕಾರ ಹೇಳಿದೆ. ಸರ್ಕಾರ ಕಾನೂನನ್ನು ಕೈಗೆ ತೆಗೆದುಕೊಂಡಿದೆ. ಪೊಲೀಸರು ಬೇಡ ಅಂದರು ಸರ್ಕಾರ ಕಾರ್ಯಕ್ರಮವನ್ನು ಮಾಡಿದೆ. ಸಿಎಂ, ಡಿಸಿಎಂ ಹಾಗು ಗೃಹ ಸಚಿವರು ಪೊಟೋ ಶೂಟ್ ನಲ್ಲಿದ್ದರು. ಸಿಎಂ ಮೊದಲ ಮಾಧ್ಯಮಗೋಷ್ಠಿಯಲ್ಲಿ ನಮ್ಮದೇನು ತಪ್ಪಿಲ್ಲ ಎಂದು ಹೇಳಿದ್ದರು. ಮೊದಲು ಡಿಸಿ ಅವರಿಂದ ತನಿಖೆಗೆ ಆದೇಶಿಸಿದ್ದರು. ಮಾರನೇ ದಿನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಹಾಗೂ ಸಿಐಡಿಯಿಂದ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ. ಇದನ್ನು ಮುಚ್ಚಿಹಾಕಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಸರ್ಕಾರನೇ ಅಪರಾಧಿ ಆಗಿರುವುದರಿಂದ ನ್ಯಾಯಾಂಗ ತನಿಖೆ ಆಗಬೇಕು ಆಗ್ರಹಿಸಿದರು.
Update: 2025-06-06 06:28 GMT