ಮೈಸೂರು ಮಹಾರಾಜರ ಅಂಗರಕ್ಷಕ ಪಡೆಯಲ್ಲಿದ್ದ ಮುಸ್ಲಿಂ ಸೈನಿಕರು: ಭಾನು ಮುಷ್ತಾಕ್
ತಮ್ಮ ಮಾವ ಸಿಪಾಯಿ ಮಹಮ್ಮದ್ ಗೌಸ್ ಮೈಸೂರು ಮಹಾರಾಜರ ಅಂಗರಕ್ಷಕ ಪಡೆಯ ಸೈನಿಕರಾಗಿದ್ದರು. ಅವರು ಮಾತ್ರವಲ್ಲದೆ, ಆ ಪಡೆದಲ್ಲಿ ಅನೇಕ ಮುಸ್ಲಿಂ ಅಂಗರಕ್ಷಕರು ಸೇವೆ ಸಲ್ಲಿಸುತ್ತಿದ್ದರು. ಜಯಚಾಮರಾಜ ಒಡೆಯರ್ ಅವರು ಧಾರ್ಮಿಕ ಭೇದವಿಲ್ಲದೆ, ಮುಸ್ಲಿಂ ಸೈನಿಕರ ಮೇಲೂ ಸಂಪೂರ್ಣ ನಂಬಿಕೆ ಇಟ್ಟು ಅವರನ್ನು ಅಂಗರಕ್ಷಕರಾಗಿ ನೇಮಕ ಮಾಡಿದ್ದರು. ಇದು ನನಗೆ ಹೆಮ್ಮೆ ತಂದಿದೆ ಎಂದು ಬಾನು ಮುಷ್ತಾಕ್ ತಮ್ಮ ದಸರಾ ಉದ್ಘಾಟನಾ ಭಾಷಣೆಯಲ್ಲಿ ತಿಳಿಸಿದರು.
Update: 2025-09-22 05:41 GMT