ಆರ್ಸಿಬಿ ದುರಂತಕ್ಕೆ ಸರ್ಕಾರವೇ ಕಾರಣ, ಬಿಜೆಪಿ-ಜೆಡಿಎಸ್ ಸದಸ್ಯರ ಸಭಾತ್ಯಾಗ
ಆರ್ಸಿಬಿ ಬಹಳ ತರಾತುರಿಯಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ಇದು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ. ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲದಿದ್ದರು ಸರ್ಕಾರವೇ ಈ ಕಾರ್ಯಕ್ರಮ ಮಾಡಿತ್ತು ಎಂದು ಆರ್. ಅಶೋಕ್ ಆರೋಪಿಸಿದರು.
ಆದರೂ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ.ಸಿಎಂ ಸಿದ್ದರಾಮಯ್ಯಗೆ ಸ್ವಲ್ಪವೂ ಹೃದಯವಂತಿಕೆ ಇಲ್ಲವೇ, ಘಟನೆ ಆದ ಒಂದು ಗಂಟೆಗೆ ವಿಷಯ ತಿಳಿಯಿತು ಎಂದು ಸಿಎಂ ಹೇಳುತ್ತಾರೆ. ಇದು ಗುಪ್ತಚರ, ಸರ್ಕಾರದ ವಿಫಲತೆಯಲ್ಲವೆ ಎಂದು ಪ್ರಶ್ನಿಸಿದರು.
ಸಿಎಂ ನೀಡಿದ ಉತ್ತರ ನಮಗೆ ಸಮಾದಾನವಾಗಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
Update: 2025-08-22 07:24 GMT