ಜಾತಿ ಗಣತಿ ವರದಿ ಮರುಪರಿಶೀಲನೆಯಲ್ಲಿ ತಪ್ಪೇನಿದೆ; ಲಾಡ್
ಜಾತಿಗಣತಿ ಮರು ಸಮೀಕ್ಷೆ ಕುರಿತು ಪ್ರತಿಪಕ್ಷಗಳು ಮೊದಲು ಆರೋಪ- ಆತಂಕಕ್ಕಿರುವ ವ್ಯತ್ಯಾಸ ತಿಳಿದುಕೊಳ್ಳಬೇಕು. ಸರ್ಕಾರ ವರದಿ ಜಾರಿ ಮಾಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಸಣ್ಣ ಪುಟ್ಟ ಹಾಗೂ ಪ್ರಬಲ ಸಮುದಾಯಗಳು ತಮ್ಮ ಜನಸಂಖ್ಯೆಯ ಅಂಕಿ ಅಂಶಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಮರು ಸಮೀಕ್ಷೆಗೆ ಸೂಚಿಸಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಜಾತಿಗಣತಿ ವರದಿಯನ್ನು ಅನುಷ್ಠಾನ ಮಾಡಲು ಬದ್ಧವಾಗಿದೆ. ಆದರೆ, ಕಾಂತರಾಜ್ ವರದಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅನುಷ್ಠಾನ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
Update: 2025-06-12 06:16 GMT